ಶುಕ್ರವಾರ , ಏಪ್ರಿಲ್ 26 2024
kn
Breaking News

ಮೂಡಲಗಿ

ದೇಶ ಗಂಡಾತರದಲ್ಲಿ ಇದೆ ವೈದ್ಯರ ಸರಕಾರಗಳ ಸೌಲಭ್ಯ ಪಡೆದು ಕೊರೊನಾದಿಂದ ಮುಕ್ತರಾಗೋಣ- ಸಚಿವ ರಮೇಶ್ ಜಾರಕಿಹೊಳಿ

ಮೂಡಲಗಿ :- ಕೊರೊನಾ ಇಡೀ ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರವ ಹಿನ್ನಲೆ ರಾಜಕೀಯ ನಾಯಕರು ಬರಿ ಭಾಷಣ ಮಾಡಿ ಹೋಗುವುದು ಅಲ್ಲ, ಯಾವುದೇ ಜಾತಿ ಪಕ್ಷ ಅಲ್ಲದೇ ವಿರೋಧ ಪಕ್ಷದ ಮುಖಂಡರು ಸಹ ಸೇರಿ ಮಾಡುವಂತ ಕೆಲಸವಾಗಿದೆ ಎಂದು ಗೋಕಾಕ ಶಾಸಕ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು ಮೂಡಲಗಿ ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಕೊರೊನಾ ವೈರಸ್ ಬಗ್ಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಪರಿಶೀಲನಾ ಸಭೆಯಲ್ಲಿ …

Read More »

ಕುಟುಂಬ ಸದಸ್ಯರೊಂದಿಗೆ ದೀಪ ಬೆಳಗಿಸಿದ: ಮಾರುತಿ ಸವಳೇಕರ

ಮೂಡಲಗಿ: ಪ್ರಧಾನಿ ಮೋದಿಯವರು ಹೇಳಿದ ಹಾಗೆ ದಿ.೫-೪-೩೦೩೦ ರಂದು ರಾತ್ರಿ ೯ಗಂಟೆಯಿಂದ ೯ನಿಮಿಷದ ವರೆಗೆ ದೀಪ ಬೆಳಗಿಸಿ, ಕೋರೊನಾ ಓಡಿಸಿ ಎಂದು ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ದುರ್ಗಾ ದೇವಿಯನ್ನು ಸ್ಮರಿಸುತ್ತಾ, ಕೋರೊನಾ ಮಾಹಾಮಾರಿಯಿಂದ ದೇಶದ ಜನತೆಯನ್ನು ಕಾಪಾಡು ತಾಯಿ ಎಂದು ಸರ್ವವಾಣಿ ನ್ಯೂಸ್ ಸಂಪಾದಕ ಮಾರುತಿ ಸವಳೇಕರ ಮತ್ತು ಅವರ ದರ್ಮಪತ್ನಿ, ಪುತ್ರರು, ಮೊಮ್ಮಕ್ಕಳೊಂದಿಗೆ ೯ನಿಮಿಷಗಳ ಕಾಲ ದೀಪ ಬೆಳಗಿಸುವ ಮೂಲಕ ಬೇಡಿಕೊಂಡರು.

Read More »

ಬೆಳಗಾವಿಯಲ್ಲಿ ಕೋರೊನಾ ಸೊಂಕಿತರ ಸಂಖ್ಯೇಯಲ್ಲಿ ಏರಿಕೆ..!

ಬೆಳಗಾವಿ: ಕೋವಿಡ್-೧೯ ಭಾರತವನ್ನು ಸೇರಿ ಪ್ರಪಂಚವನ್ನೆ ಆಹುತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಕೋರೊನಾ ವೈರಸನ್ನು ಹತ್ತಿಕ್ಕುವ ಸಲುವಾಗಿ ಇಡೀ ಪ್ರಪಂಚವೇ ಪ್ರಯತ್ನಿಸುತ್ತಿದೆ. ಭಾರತಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡರು, ೨೧ದಿನ ಲಾಕ್ ಡೌನ್ ಘೋಷಣೆಯಾದರೂ, ಕೋವಿಡ್-೧೯ ಹತ್ತಿಕ್ಕಲೂ ಆಗದ ರೀತಿಯಲ್ಲಿ ಈ ಮಾಹಾಮಾರಿ ವೈರಸ್ ಹಬ್ಬುತ್ತಿರುವದು ದೇಶದ ಜನತೆಯಲ್ಲಿ ಆಂತಕಕ್ಕೆ ಕಾರಣವಾಗುತ್ತಿದೆ. ದಿ.5-4-2020 ಸಾಯಂಕಾಲ 5ಘಂಟೆಗೆ ಬಂದಿರುವ ವರದಿಯ ಪ್ರಕಾರ ಕರ್ನಾಟಕದಲ್ಲಿ 151 ಸೋಂಕಿತರನ್ನ ಆರೋಗ್ಯ …

Read More »

ಮಹತ್ವದ ಆದೇಶ ನೀಡಿದ: ಜಿಲ್ಲಾಧಿಕಾರಿ ಬೊಮ್ಮನಹಳ್ಳಿ

ಬೆಳಗಾವಿ- ಬೆಳಗಾವಿ ನಗರ, ಜೆಲ್ಲೆಯ ಕೆಲವು ತಾಲೂಕುಗಳಲ್ಲಿ ಹಾಗೂ ವಿವಿಧ ಗ್ರಾಮಗಳಲ್ಲಿ ಕೆಲವರು ರಸ್ತೆಯನ್ನು ಅಗೆದು, ರಸ್ತೆಗೆ ಬೇಲಿ ಹಾಕಿ ಮತ್ತು ಗಲ್ಲಿ-ಗಲ್ಲಿಗಳಲ್ಲಿ ಬ್ಯಾರಿಕೆಡ್ ಹಾಕಿ ರಸ್ತೆಗಳನ್ನು ಬಂದ್ ಮಾಡುತ್ತಿರುವದರಿಂದ ಲಾಕ್-ಡೌನ್ ಯಶಸ್ವಿಯಾಗಬಹುದೆ ವಿನಹಃ ಪಡಿತರ ಧಾನ್ಯಗಳ ಸಾಗಾಣಿಕೆಗೆ, ಹಾಲು ಮಾರಾಟಗಾರರಿಗೆ, ಆ್ಯಂಬುಲೆನ್ಸ್ ಓಡಾಟಕ್ಕೆ ತೊಂದರೆಯಾಗುವುದು ಖಂಡಿತ. ಈ ರೀತಿ ರಸ್ತೆ ಬಂದ್ ಮಾಡುವದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ಆ್ಯಂಬುಲೆನ್ಸ್ ಓಡಾಡುವ ಮುಖ್ಯ ರಸ್ತೆಗಳಿಗೆ …

Read More »

ಕಂಟಕವಾದ ಕೊರೋನಾ ಓಡಿಸಲು ಒಂದಾಗಿ ದೀಪ ಹಚ್ಚೋನಾ

ಆಚಾರ-ವಿಚಾರ, ಸಂಪ್ರದಾಯಗಳಿಗೆ ಸನಾತನ ಧರ್ಮವಾದ ಹಿಂದೂ ಧರ್ಮವು ತಾಯಿ ಎಂದು ಕರೆಯಬಹುದು. ನಮಗೆ ಗೊತ್ತಿರುವಂತೆಯೇ ಹಲವಾರು ಆಚಾರ ವಿಚಾರಗಳು ಇದರಲ್ಲಿ ಇದೆ, ಇನ್ನು ಗೊತ್ತಿಲ್ಲದಂತೆ ಎಷ್ಟು ಇವೆ ಎಂದು ಲೆಕ್ಕ ಹಾಕಲು ಹೋದರೆ, ಅದು ಒಂದು ದೊಡ್ಡ ಗಣತಿಯಂತಾಗುತ್ತದೆ. ಕೆಲವೊಂದು ಸಣ್ಣ ಸಣ್ಣ ಆಚಾರಗಳಿಂದ ಹಿಡಿದು, ಬಹಳಷ್ಟು ದಿನಗಳ ಕಾಲ ನಡೆಯುವ ಅನುಷ್ಟಾನಗಳವರೆಗೆ ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿವೆ. ಅದರಲ್ಲಿ ಒಂದು ದೀಪ ಹಚ್ಚುವುದು. ಮನೆಯಲ್ಲಿ ದೇವರ ಕೋಣೆಯಲ್ಲಿ ನಾವು …

Read More »

ತಾವೇ ಸ್ವತಃ ಔಷಧಿ ಸಿಂಪಡಿದ ಪುರಸಭೆ ಆರೋಗ್ಯಾಧಿಕಾರಿ

ಮೂಡಲಗಿ- ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪುರಸಭೆ ಆರೋಗ್ಯಾಧಿಕಾರಿ ಚಿದಾನಂದ ಮುಗುಳಖೋಡ ಭಾನುವಾರ ಈರಣ್ಣ ನಗರ ಕೆ.ಇ.ಬಿ.ಪ್ಲಾಟ್,ವಿಜಯ ನಗರ,ಲಕ್ಷ್ಮೀ ನಗರ ಮತ್ತು ವಿವಿಧ ವಾಡು೯ಗಳಲ್ಲಿ ಸಂಚರಿಸಿ ಸುಡು ಬಿಸಿಲು ಲೆಕ್ಕಿಸದೆ ತಾವೇ ಸ್ವತಃ ಔಷಧಿ ಸಿಂಪಡಿಸಿದರು. ರೋಗ ಹರಡದಂತೆ ನಿಮ್ಮ ನಗರ, ಬೀದಿಗಳನ್ನು ಸ್ವಚ್ಚವಾಗಿಡಿ,ಕೊರೋನಾ ನಿಯಂತ್ರಣ ಮಾಡುವುದು ಸರ್ಕಾರದ ಜವಾಬ್ದಾರಿ ಅಷ್ಟೇ ಅಲ್ಲ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ವಾಗಿದೆ. ಕಾರಣ ಜನರು ಮನೆಯಿಂದ ಹೊರಗೆ ಬರದೆ ಮನೆಯಲ್ಲೇ ಇರಿ …

Read More »

ಪ್ರಧಾನಿ ಮೋದಿಯವರ ದೀಪ ಬೆಳಗಿಸುವ ಸಂಕಲ್ಪವನ್ನ ಯಶಸ್ವಿಗೊಳಿಸಬೇಕಿದೆ: ಡಾ. ಸಿ ಬಿ ಕುಲಿಗೋಡ

ಮುಗಳಖೋಡ: ಕೊರೊನಾ ಸೊಂಕಿನಿಂದ ಸೃಷ್ಠಿಯಾಗಿರುವ ಅಂಧಕಾರದಿಂದ ದೇಶವನ್ನು ಬೆಳಕಿನೆಡೆಗೆ ಒಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭಿಯಾನ ಪ್ರಕಟಿಸಿದ್ದು, ಭಾನುವಾರ ರಾತ್ರಿ 9 ಗಂಟೆಗೆ ನಡೆಯುವ ದೀಪ ಬೆಳಗುವ ಅಭಿಯಾನವನ್ನು ಯಶಸ್ವಿಗೊಳಿಸಿ ಕೊರೊನಾ ಹೊಡೆದೊಡಿಸುವಲ್ಲಿ ಒಗ್ಗಟ್ಟುನ್ನು ಪ್ರದರ್ಶಿಸುವಂತೆ ಪಟ್ಟಣದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಎನ್.ಎಸ್‌.ಎಸ್ ಹಾಗೂ ರೇಡ್ ಕ್ರಾಸ್ ಘಟಕದ ವತಿಯಿಂದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ರವಿವಾರ ಎಪ್ರೀಲ್-5ರಂದು ಮನೆ-ಮನೆಗಳಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕೊರೊನಾ ಕತ್ತಲಿನಿಂದ ಬೆಳಕಿನೆಡೆಗೆ …

Read More »

ದೀಪ ಬೆಳಗಿಸೋಣ, ಕೊರೋನಾ ಓಡಿಸೋಣ: ಕೆಎಮ್‍ಎಫ್ ಅಧ್ಯಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಕೊರೊನಾ ಸೊಂಕಿನಿಂದ ಸೃಷ್ಠಿಯಾಗಿರುವ ಅಂಧಕಾರದಿಂದ ದೇಶವನ್ನು ಬೆಳಕಿನೆಡೆಗೆ ಒಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭಿಯಾನ ಪ್ರಕಟಿಸಿದ್ದು, ಭಾನುವಾರ ರಾತ್ರಿ 9 ಗಂಟೆಗೆ ನಡೆಯುವ ದೀಪ ಬೆಳಗುವ ಅಭಿಯಾನವನ್ನು ಯಶಸ್ವಿಗೊಳಿಸಿ ಕೊರೊನಾ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಶನಿವಾರ ಮಾಧ್ಯಮ ಪ್ರಕಟನೆ ನೀಡಿರುವ ಅವರು, ಎಪ್ರೀಲ್-5ರಂದು ಮನೆ-ಮನೆಗಳಲ್ಲಿ ಜ್ಯೋತಿ ಬೆಳಗಿಸುವ …

Read More »

ಕಲ್ಲೋಳ್ಳಿ ಮತ್ತು ವಡೇರಹಟ್ಟಿ ಗ್ರಾಮಕ್ಕೆ ಇರುವ ರಸ್ತೆ ಸಂಪರ್ಕ ಮಾರ್ಗ ಬಂದ್

ವಡೇರಹಟ್ಟಿ: ಕೋರೊನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ಕಂಡು ದಿನಾಂಕ: 4-4-2020ರ ಮುಂಜಾನೆ 10ಘಂಟೆಯಿಂದ ಗ್ರಾಮದ ಎಲ್ಲ ಅಂಗಡಿ-ಮುಂಗಟ್ಟುಗಳು ಬಂದ ಆಗಲಿದ್ದು, ಯಾವುದೇ ಕಾರಣಕ್ಕು ಜನರು ಬೀದಿಗೆ ಇಳಿಯಬಾರದು. ಕಾರಣ ಕೋರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವದರಿಂದ ಹೈ-ಅಲರ್ಟ್ ಘೋಷಣೆಯಾಗಿದ್ದರಿಂದ ದಿ.8-4-2020ರ ಬೆಳಿಗ್ಗೆ 6ಘಂಟೆಯವರೆಗೆ ಯಾವುದೇ ವಾಹನಗಳು ಮತ್ತು ಸಾರ್ವಜನಿಕರು ರಸ್ತೆಗೆ ಇಳಿಯದಂತೆ ಸೂಚಿಸಿ. ಕೇವಲ ಔಷದ ಅಂಗಡಿ ಮತ್ತು ಆಸ್ಪತ್ರೆಗಳು ಮಾತ್ರ ಪ್ರಾರಂಭವಿದ್ದು, ಅಲ್ಲಿಯೂ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚಿಸಿದ್ದು, …

Read More »

ಹಳ್ಳೂರ : ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಗೆ ಮುಳ್ಳಿನ ಸರ್ಪಗಾವಲು

ಹಳ್ಳೂರ : ಬೆಳಗಾವಿಯಲ್ಲಿ ಮೂರು ಕೊರೊನಾ ಪಾಸಿಟಿವ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾದ್ಯಾಂತ್ಯ ಜನರಲ್ಲಿ ಆತಂಕ ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಗ್ರಾಮದ ಸಾರ್ವಜನಿಕರು ಹಾಗೂ ಗ್ರಾಪಂ ಅಧಿಕಾರಿಗಳು ಮತ್ತು ಪೋಲಿಸ್ ಸಿಬ್ಬಂದಿ ನೇತೃತ್ವದಲ್ಲಿ ಇಂದು ಗ್ರಾಮದ ಪ್ರಮುಖ ದಾರಿಗೆ ಹಾಗೂ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಗೆ ಮುಳ್ಳಿನ ಸರ್ಪಗಾವಲು ಹಾಕಿದ್ದಾರೆ. ಹೌದು ನಿನ್ನೆ ಬೆಳಗಾವಿಯಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ದಿಂದ ಜಿಲ್ಲಾಡಳಿತ ಹೈಅಲರ್ಟ ಘೋಷಣೆ ಮಾಡಿದೆ, ಯಾರು ವಾಹನ ಮೇಲೆ ತಿರುಗಾಡದಂತೆ …

Read More »

You cannot copy content of this page