ಸೋಮವಾರ , ಜೂನ್ 5 2023
kn
Breaking News

ತಾವೇ ಸ್ವತಃ ಔಷಧಿ ಸಿಂಪಡಿದ ಪುರಸಭೆ ಆರೋಗ್ಯಾಧಿಕಾರಿ

Spread the love

ಮೂಡಲಗಿ- ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪುರಸಭೆ ಆರೋಗ್ಯಾಧಿಕಾರಿ ಚಿದಾನಂದ ಮುಗುಳಖೋಡ ಭಾನುವಾರ ಈರಣ್ಣ ನಗರ ಕೆ.ಇ.ಬಿ.ಪ್ಲಾಟ್,ವಿಜಯ ನಗರ,ಲಕ್ಷ್ಮೀ ನಗರ ಮತ್ತು ವಿವಿಧ ವಾಡು೯ಗಳಲ್ಲಿ ಸಂಚರಿಸಿ ಸುಡು ಬಿಸಿಲು ಲೆಕ್ಕಿಸದೆ ತಾವೇ ಸ್ವತಃ ಔಷಧಿ ಸಿಂಪಡಿಸಿದರು.

ರೋಗ ಹರಡದಂತೆ ನಿಮ್ಮ ನಗರ, ಬೀದಿಗಳನ್ನು ಸ್ವಚ್ಚವಾಗಿಡಿ,ಕೊರೋನಾ ನಿಯಂತ್ರಣ ಮಾಡುವುದು ಸರ್ಕಾರದ ಜವಾಬ್ದಾರಿ ಅಷ್ಟೇ ಅಲ್ಲ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ವಾಗಿದೆ. ಕಾರಣ ಜನರು ಮನೆಯಿಂದ ಹೊರಗೆ ಬರದೆ ಮನೆಯಲ್ಲೇ ಇರಿ ನಮಗೆ ನೀವು ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡರು. ಈ ಸಮಯದಲ್ಲಿ ಕಿರಿಯ ಆರೋಗ್ಯ ಅಧಿಕಾರಿ ಪ್ರೀತಮ್ ಬೋವಿ,ಸಿಬ್ಬಂದಿಗಳಾದ ಪ್ರಕಾಶ ಮಾರಿಹಾಳ,ಸುರೇಶ ಗಸ್ತಿ,ಶಿವಬೋಧ ಕಪ್ಪಲಗುದ್ದಿ,ಯಾಕೋಬ ಗಸ್ತಿ, ರವಿ ಕುದರಿ ಇದ್ದರು.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page