ಶನಿವಾರ , ಏಪ್ರಿಲ್ 27 2024
kn
Breaking News

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the love

ಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿರುವುದನ್ನು ಸ್ವಾಗತಿಸುತ್ತೇವೆ, ಬಾಲಚಂದ್ರ ಜಾರಕಿಹೊಳಿ ಅವರು ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಮಾಜಿ ಎಮ್.ಎಲ್.ಸಿ ಎಚ್.ಸಿ.ನೀರಾವರಿ ಅವರ ನೇತೃತ್ವದಲ್ಲಿ ಉಪ್ಪಾರ ಸಮಾಜಕ್ಕೆ ಎಸ್.ಸಿ/ಎಸ್.ಟಿ ಮಿಸಲಾತಿಗಾಗಿ ಮನವಿ ನೀಡಿದ್ದೇವು ಆಗಲೇ ಅವರು ಶಿಪಾರಸ್ಸು ಮಾಡಿದ್ದರೆ ಈಗ ಪ್ರತಿಭಟನೆ ಮಾಡುವ ಅವಶ್ಯಕತೆ ಬರುತ್ತಿರಲಿಲ್ಲಿ, ಈಗಲಾದರೂ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉಪ್ಪಾರ ಸಮಾಜದ ಮೀಸಲಾತಿಗಾಗಿ ಧ್ವನಿ ಎತ್ತಿ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಉಪ್ಪಾರ ಸಮಾಜದ ಮುಖಂಡ ಬಿ.ಬಿ.ಹಂದಿಗುoದ ಆಗ್ರಹಿಸಿದರು.
ಶುಕ್ರವಾರ ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಪಟ್ಟಣದ ಈರಣ್ಣ ದೇವಸ್ಥಾನದಿಂದ ಕಲ್ಮೇಶ್ವರ ವೃತ್ತದ ವರೆಗೆ ಬೃಹತ್ ಬೈಕ್ ರ‍್ಯಾಲಿ ಮತ್ತು ಪಾದಯಾತ್ರೆಯೊಂದಿಗೆ ಕಲ್ಮೇಶ್ವರ ವೃತ್ತಕ್ಕೆ ಬಂದ ಮೂಡಲಗಿ ತಾಲೂಕಾ ಉಪ್ಪಾರ ಸಮಾಜ ಮತ್ತು ಶ್ರೀ ಮಹರ್ಷಿ ಭಗೀರಥ ಉಪ್ಪಾರ ಸಮಾಜ ಸಂಘದಿoದ ಸಮಾಜದ ಅಪಾರ ಜನಸ್ತೋಮದಿಂದ ಕೂಡಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಮಾಜಿ ಪ್ರಧಾನಿ ಮತ್ತು ಮುಖ್ಯ ಮಂತ್ರಿ ದೇವೆಗೌಡ್ರ ಅವರು ಉಪ್ಪಾರ ಸಮಾಜದ ಮೀಸಲಾತಿ ಕೋಡುವ ಬಗ್ಗೆ ಸಂಸತಿನಲ್ಲಿ ಧ್ವನಿ ಎತ್ತಿದ್ದಾರೆ, ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಅಷ್ಟೇ ಅಲ್ಲದೇ ಔದ್ಯೋಗಿಕವಾಗಿ ಸಹಿತ ಅತೀ ಹಿಂದುದಲಿದ ಸಮಾಜವಾದ ಉಪ್ಪಾರ ಸಮಾಜವನ್ನು ಮುಖ್ಯ ಮಂತ್ರಿ ಬೋಮ್ಮಾಯಿ ಅವರು ಉಪ್ಪಾರ ಸಮಾಜಕ್ಕೆ ಈ ಹಿಂದೆ ತಾವು ಜಲ ಸಂಪನ್ಮೂಲ ಸಚೀವರಾಗಿದ್ದಾಗ ಅಂದಿನ ಮುಖ್ಯ ಮಂತ್ರಿಗಳಿಗೆ ಶಿಫಾರಸ್ಸು ಮಾಡಿರುವಂತೆ ಸದ್ಯ ತಾವೇ ಮುಖ್ಯ ಮಂತ್ರಿಗಳಾಗಿರುವರಿoದ ಉಪ್ಪಾರ ಸಮಾಜವನ್ನು ಎಸ್.ಸಿ/ಎಸ್.ಟಿ ಮಿಸಲಾತಿ ನೀಡುವ ಬಗ್ಗೆ ತಮ್ಮದೆ ಸರಕಾರ ಇರುವ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದರು ಆಗ್ರಹಿಸಿದರು.
ನ್ಯಾಯವಾದಿ ಎಸ್.ಎಮ್.ಹತ್ತಿಕಟ್ಟಗಿ, ಉಪ್ಪಾರ ಸಮಾಜವು ಕರ್ನಾಟಕ ರಾಜ್ಯದಲ್ಲಿ ಸುಮಾರು ೫೦ ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಅತೀ ಹಿಂದುಳಿದ ಜಾತಿಯಾಗಿರುತ್ತದೆ. ಉಪ್ಪಾರ ಸಮಾಜವನ್ನು ಹಲವು ದಶಕಗಳಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಮಾಜದ ಪೂಜ್ಯರು ಹಾಗೂ ಹಿರಿಯರು ಬೃಹತ್ ಸಮಾವೇಶಗಳನ್ನು ಏರ್ಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪ್ಪಾರ ಸಮಾಜ ತಾಲೂಕಾ ಸಂಘದ ಅಧ್ಯಕ್ಷ ರಾಮಣ್ಣ ಹಂದಿಗುoದ ಮತ್ತು ಶ್ರೀ ಮಹರ್ಷಿ ಭಗೀರಥ ಉಪ್ಪಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಬಸು ಹಂದಿಗುoದ ಮಾತನಾಡಿ, ಉಪ್ಪಾರ ಸಮಾಜದ ನ್ಯಾಯಯುತ ಹೋರಾಟಕ್ಕೆ ಸರಕಾರ ಸ್ಪಂದಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಅರ್ಜುನ ನಾಯಿಕವಾಡಿ, ಪರಸಪ್ಪ ಬಬಲಿ, ಶಿವಪುತ್ರಪ್ಪ ಜಕ್ಕಬಾಳ, ಸದಾಶಿವ ಗುದಗಗೋಳ, ಕಸ್ತೂರಿ ಹೆಗ್ಗಾಣಿ ಮಾತನಾಡಿದರು.

ಪ್ರತಿಭಟನಾಕಾರಿಂದ ಮನವಿ ಸ್ವೀಕರಿಸಿದ ಮೂಡಲಗಿ ತಹಶೀಲ್ದಾರ ಮಾತನಾಡಿ, ತಮ್ಮ ಬೇಡಿಕೆಯನ್ನು ಶೀಘ್ರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಈಶ್ವರ ಕಂಕಣವಾಡಿ, ಬಸವರಾಜ ಖಾನಪ್ಪನವರ, ಸುಭಾಸ ಪೂಜೇರಿ, ಅಪ್ಪಯ್ಯ ಬಡ್ನಿಗೋಳ, ಶಂಕರ ಬೀಲಕುಂದಿ, ವಿಠಲ ಸವದತ್ತಿ, ವಿಷ್ಣು ಲಾತೂರ, ಮುತ್ತೆಪ್ಪ ಕುಳ್ಳೂರ, ಚಂದ್ರು ಬೆಳಗಲಿ, ಶಿವಪ್ಪ ಅಟಮಟ್ಟಿ, ಶ್ರೀಶೈಲ್ ಪುಜೇರಿ, ಗುರುನಾಥ ಗಂಗಣ್ಣವರ, ಹನುಮಂತ ಕಂಕಣವಾಡಿ, ಸಾಬಪ್ಪ ಬಂಡ್ರೋಳಿ, ಮಹಾದೇವ ಕಂಕಣವಾಡಿ, ಲಕ್ಷ್ಮಣ ಬಂಡ್ರೋಳಿ, ಶಿವಪ್ಪ ಮರ್ದಿ, ವಿಠ್ಠಲ ಗುಡೆನ್ನವರ, ಮಲ್ಲಿಕಾರ್ಜುನ ಚೌಕಾಶಿ, ಅಶೋಕ ಕಸ್ತೂರಿ, ಅಡಿವೇಪ್ಪ ಕಿತ್ತೂರ, ಹನಮಂತ ಪೂಜೇರಿ, ಸಿದ್ದಪ್ಪ ಹಮನ್ನವರ, ಬಸವರಾಜ ಆಯಟ್ಟಿ, ಮಹಾದೇವ ಮಲಗೌಡರ, ಶಂಭುಲಿoಗ ಮುಕ್ಕನವರ, ಸುಭಾಸ ಗೊಡ್ಯಾಗೋಳ, ರಮೇಶ ಉಪ್ಪಾರ ಸೇರಿದಂತೆ ಮೂಡಲಗಿ-ಗೋಕಾಕ ತಾಲೂಕಿನ ವಿವಿಧ ಗ್ರಾಮದ ಉಪ್ಪಾರ ಸಮಾಜ ಭಾಂದವರು ಭಾಗವಹಿಸಿದ್ದರು.


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page