ಶುಕ್ರವಾರ , ಏಪ್ರಿಲ್ 26 2024
kn
Breaking News

gcsteam

ಶ್ರೀ ಹನುಮಾನ ದೇವಸ್ಥಾನದಲ್ಲಿ ನೂತನ ಹನುಮಾನ ದೇವರ ಮೂರ್ತಿ ಪ್ರತಿಷ್ಠಾಪನೆ

ಮೂಡಲಗಿ: ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಶ್ರೀ ಹನುಮಾನ ದೇವಸ್ಥಾನದಲ್ಲಿ ನೂತನ ಹನುಮಾನ ಮೂರ್ತಿಯನ್ನು ಸೋಮವಾರ ಬೆಳಿಗ್ಗೆ ಹೋಮ, ರುದ್ರಾಭಿಷೇಕ ಹಾಗೂ ವಿವಿಧ ವಿಧಿ, ವಿಧಾನಗಳ ಮೂಲಕ ಪ್ರತಿಷ್ಠಾಪನೆ ಮಾಡಿದರು. ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿದ್ದ ಮರೆಗುದ್ದಿ ನಿರುಪಾದೇಶ್ವರ ಸ್ವಾಮೀಜಿ ಅವರು ಮಾತನಾಡಿ ಒಂದು ಶಿಲ್ಪವು ದೇವರಾಗಬೇಕಾದರೆ ಅದಕ್ಕೆ ಸಂಸ್ಕಾರವನ್ನು ನೀಡಬೇಕು. ಗುರುವಿನ ಸ್ಪರ್ಶ, ಮಾರ್ಗದರ್ಶನ ಬೇಕಾಗುವುದು. ಹಾಗೆಯೇ ಮನುಷ್ಯನು ಸಹ ದೈವಭಕ್ತನಾಗಿ ಸಂಸ್ಕಾರ ಮತ್ತು ಗುರುವಿನ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಜೀವನವನ್ನು …

Read More »

ಮೂಡಲಗಿಯ ಕೊಡುಗೈ ದಾನಿ ದಿ.ಕೆ.ಎಚ್.ಸೋನವಾಲ್ಕರ 17ನೇ ಪುಣ್ಯಸ್ಮರಣೆ

ಮೂಡಲಗಿ: ಶಿಕ್ಷಣ ಕ್ಷೇತ್ರಕ್ಕೆ ಕೆ.ಎಚ್.ಸೋನವಾಲ್ಕರ ಅವರ ಕೊಡುಗೆ ಅಪಾರವಾದುದು ಮತ್ತು ಅವರ ಸಾಮಾಜಿಕ ಕಳಕಳಿ ಇತರರಿಗೆ ಮಾದರಿಯಾಗಿದೆ ಎಂದು ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಹೇಳಿದರು. ಣ ಪಟ್ಟಣದ ಕೊಡುಗೈ ದಾನಿ ಹಾಗೂ ಸಾಮಾಜಿಕ ಕಳಕಳಿಯುಳ್ಳ ಹಾಗೂ ಮೂಡಲಗಿ ಸರಕಾರಿ ಪ್ರೌಢ ಶಾಲೆಯ ಭೂ ದಾನಿ ದಿ.ಕೆ.ಎಚ್.ಸೋನವಾಲ್ಕರ 17 ನೇ ಪುಣ್ಯಸ್ಮರಣೆ ನಿಮಿತ್ತ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಹಾಗೂ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರಿಂದ …

Read More »

ಶ್ರೀ ಬಸವೇಶ್ವರ ಕೋ.ಆಪ್ ಕ್ರಡಿಟ್ ಸೊಸೈಟಿಗೆ ರೂ. 4.13 ಕೋಟಿ ಲಾಭ : ತೇಲಿ

ಮೂಡಲಗಿ : ಇಲ್ಲಿಯ ಶ್ರೀ ಬಸವೇಶ್ವರ ಕೋ.ಆಪ್ ಕ್ರೆಡಿಟ್ ಸೊಸೈಟಿಯು 2022ರ ಮಾರ್ಚ ಅಂತ್ಯಕ್ಕೆ ರೂ.4.13.83.527 ರೂ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಬಸವರಾಜ ತೇಲಿ ತಿಳಿಸಿದರು. ಶುಕ್ರವಾರ ಸೊಸೈಟಿಯ ಪ್ರಗತಿ ಕುರಿತು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಸೊಸೈಟಿಯು ಸದ್ಯ ರೂ. 5.07 ಕೋಟಿ ಶೇರು ಬಂಡವಾಳ, ರೂ. 13.90 ಕೋಟಿ ನಿಧಿಗಳು, ರೂ. 154.22 ರೇವುಗಳು, ರೂ. 49.55 ಕೋಟಿ ವಿವಿಧ ಬ್ಯಾಂಕ್‌ಗಳಲ್ಲಿ …

Read More »

ಜನ ಹಾಗೂ ಜಾನುವಾರಿಗಳಿಗೆ ಕುಡಿಯುವ ನೀರಿಗಾಗಿ ೧೦ ದಿನಗಳವರೆಗೆ ನೀರು ಬಿಡಲು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಹಿಡಕಲ್ ಜಲಾಶಯದಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರನ್ನು ತಕ್ಷಣವೇ ಘಟಪ್ರಭಾ ಎಡದಂಡೆ, ಘಟಪ್ರಭಾ ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ನೀರನ್ನು ಬಿಡುಗಡೆ ಮಾಡುವಂತೆ ಕೆಎಮ್‌ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗುರುವಾರ ಸಂಜೆ ಪ್ರತಿಕಾ ಹೇಳಿಕೆಯನ್ನು ನೀಡಿರುವ ಅವರು, ಈಗಾಗಲೇ ಹಿಡಕಲ್ ಜಲಾಶಯದಲ್ಲಿ ಗುರುವಾರದ ಮಾಹಿತಿಯಂತೆ ೧೨ ಟಿಎಮ್‌ಸಿ ನೀರು ಸಂಗ್ರಹವಿದ್ದು, ಮೂರೂ ಕಾಲುವೆಗಳಿಗೆ …

Read More »

ಬೀರಪ್ಪ ಅಂಡಗಿಗೆ ಕರುನಾಡು ಸಾಧಕರು ಪ್ರಶಸ್ತಿ ಪ್ರಧಾನ

ಬೆಂಗಳೂರು:ಹೈಬ್ರೀಡ್ ನ್ಯೂಜ್ ಕನ್ನಡ ಸುದ್ದಿ ವಾಹಿನಿ ಹಾಗೂ ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಕರುನಾಡು ಸಾಧಕರು ಪ್ರಶಸ್ತಿಯನ್ನು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರಿಗೆ ಎಪ್ರಿಲ್ ೨೦ ರ ಬುಧವಾರ ಬೆಂಗಳೂರು ನಗರದ ಅರಮನೆಯ ಮೈದಾನದ ಮುಂಬಾಗ ಇರುವ ವೀರಶೈವ ಭವನದಲ್ಲಿ ಪ್ರಧಾನ ಮಾಡಲಾಯಿತು. ಈ ಸಮಯದಲ್ಲಿ ಸುಕ್ಷೇತ್ರ ಕೂಲಹಳ್ಳಿ ಶ್ರೀ ಶ್ರೀ ಪಟ್ಟದ ಚಿನ್ಮಯ ಮಹಾಸ್ವಾಮಿಗಳು,ಬಿಗ್ ಬಾಸ್ ಖ್ಯಾತಿಯ ಸೋನು …

Read More »

ಬೀರಪ್ಪ ಅಂಡಗಗಿಗೆ ಕರುನಾಡು ಸಾಧಕರ ಪ್ರಶಸ್ತಿ

. ಕೊಪ್ಪಳ:ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರಿಗೆ ಹೈಬ್ರೀಡ್ ನ್ಯೂಜ್ ಕನ್ನಡ ಸುದ್ದಿ ವಾಹಿನಿ ಹಾಗೂ ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಕರುನಾಡು ಸಾಧಕರು ಪ್ರಶಸ್ತಿಗೆ ಇವರ ಸಂಘಟನಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹಾಗೂ ವಿಕಲಚೇತನ ವಿಭಾಗದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಆಯ್ಕೆ ಮಾಡಿದ್ದಾರೆ. ಎಪ್ರಿಲ್ ೨೦ ರ ಬುಧವಾರ ಬೆಂಗಳೂರು ನಗರದ ವೀರಶೈವ ಭವನದಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ …

Read More »

ಶ್ರೀ ವೇಮನ್ ಕೋ.ಆಪ್ ಕ್ರಡಿಟ್ ಸೊಸೈಟಿಗೆ ರೂ. ೧.೭೨ ಕೋಟಿ ಲಾಭ : ಅಧ್ಯಕ್ಷ ಸಂತೋಷ ಸೋನವಾಲಕರ

ಮೂಡಲಗಿ: ಇಲ್ಲಿಯ ಶ್ರೀ ವೇಮನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು ೨೦೨೨ರ ಮಾರ್ಚ ಅಂತ್ಯಕ್ಕೆ ರೂ.೧.೭೨ ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಸಂತೋಷ ಕೆ. ಸೋನವಾಲಕರ ಅವರು ತಿಳಿಸಿದರು. ಸೊಸೈಟಿಯ ಪ್ರಗತಿ ಕುರಿತು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸೊಸೈಟಿಯು ಸದ್ಯ ರೂ. ೨.೬೯ ಕೋಟಿ ಶೇರು ಬಂಡವಾಳ, ರೂ. ೬.೧೬ ಕೋಟಿ ನಿಧಿಗಳು, ರೂ. ೯೯.೧೦ ಠೇವುಗಳು, ರೂ. ೪೧.೫೬ ಕೋಟಿ ವಿವಿಧ …

Read More »

ವಿಕಲಚೇತನ ನೌಕರರ ಕಬ್ಬಡ್ಡಿ: ಬೀರಪ್ಪ ಅಂಡಗಿ ತಂಡ ಪ್ರಥಮ ಸ್ಥಾನ.

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸರಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಕಲಚೇತನ ನೌಕರರ ಕ್ರೀಡಾಕೂಟದ ಕಬ್ಬಡ್ಡಿ ಪಂದ್ಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರ ನಾಯಕತ್ವದ ತಂಡ ೧೩ ಅಂಕಗಳನ್ನು ಪಡೆಯುವುದರ ಮೂಲಕ ಪ್ರಥಮ ಸ್ಥಾನ ಪಡೆದಿದೆ. ಕುಷ್ಟಗಿಯ ನಾಗರಾಜ.ಕೆ‌.ಅವರ ನಾಯಕತ್ವದ ತಂಡ ೧೦ ಅಂಕಗಳನ್ನು ಪಡೆಯುವುದರ ಮೂಲಕ ದ್ವಿತೀಯ ಸ್ಥಾನ ಪಡೆದಿದೆ. ಬೀರಪ್ಪ ಅಂಡಗಿ ಚಿಲವಾಡಗಿ ಅವರ ತಂಡದಲ್ಲಿ ಬೀರಪ್ಪ ಅಂಡಗಿ, ಬಸವರಾಜ …

Read More »

ಕೌಜಲಗಿ ಅರ್ಬನ್ ಕೋ.ಆಪ್ ಕ್ರೆಡಿಟ್ ಬ್ಯಾಂಕಿನ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಡಾ.ರಾಜೇಂದ್ರ ಸಣ್ಣಕ್ಕಿ, ಉಪಾಧ್ಯಕ್ಷೆಯಾಗಿ ಶೋಭಾದೇವಿ ಲೋಕನ್ನವರ ಆಯ್ಕೆ

ಬೆಟಗೇರಿ: ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದ ಪ್ರತಿಷ್ಠಿತ ಸಹಕಾರ ಸಂಸ್ಥೆಯಾದ ಕೌಜಲಗಿ ಅರ್ಬನ್ ಕೋ.ಆಪ್ ಕ್ರೆಡಿಟ್ ಬ್ಯಾಂಕ ಲಿ. ಕೌಜಲಗಿ ಇದರ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಏ.12ರಂದು ನಡೆಯಿತು. ಬ್ಯಾಂಕಿನ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಯ. ಸಣ್ಣಕ್ಕಿ, ಉಪಾಧ್ಯಕ್ಷೆಯಾಗಿ ಶೋಭಾದೇವಿ ಗಂಗಾಧರ ಲೋಕನ್ನವರ ಅವಿರೂಧವಾಗಿ …

Read More »

ಮುಂದಿನ ಪೀಳಿಗೆಗೆ ಕ್ರೀಡೆಗಳ ಪರಿಚಯ ಮಾಡಿಕೊಡುವ ಅಗತ್ಯವಿದೆ: ವಿಕಾಸ ಕಿಶೋರ ಸುರಳ್ಕರ್

ಕೊಪ್ಪಳ: ಮುಂದಿನ ಪೀಳಿಗೆಗೆ ಕ್ರೀಡೆಗಳ‌ ಪರಿಚಯ ಮಾಡಿಕೊಡುವ ಅಗತ್ಯತೆಯು ಪ್ರತಿಯೊಬ್ಬರ ಮೇಲೆ ಇದೇ ಎಂದು ಜಿಲ್ಲಾಧಿಕಾರಿಗಳಾದ ವಿಕಾಸ ಕಿಶೋರ ಸುರಳ್ಕರ ಹೇಳಿದರು. ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರಕಾರಿ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ,ಪ್ರಸ್ತುತ ದಿನಮಾನಗಳಲ್ಲಿ ಅನೇಕ ತಂತ್ರಜ್ಞಾನದ ಪ್ರಭಾವದಿಂದ ಮಕ್ಕಳಲ್ಲಿ ಕ್ರೀಡಾ ಮನೋಭಾವ ಕಡಿಮೆ ಆಗಿದೆ.ಅಲ್ಲದೆ ಮಕ್ಕಳು ಕೇವಲ …

Read More »

You cannot copy content of this page