ಶನಿವಾರ , ಏಪ್ರಿಲ್ 20 2024
kn
Breaking News

ವಿಕಲಚೇತನ ನೌಕರರ ಕಬ್ಬಡ್ಡಿ: ಬೀರಪ್ಪ ಅಂಡಗಿ ತಂಡ ಪ್ರಥಮ ಸ್ಥಾನ.

Spread the love

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸರಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಕಲಚೇತನ ನೌಕರರ ಕ್ರೀಡಾಕೂಟದ ಕಬ್ಬಡ್ಡಿ ಪಂದ್ಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರ ನಾಯಕತ್ವದ ತಂಡ ೧೩ ಅಂಕಗಳನ್ನು ಪಡೆಯುವುದರ ಮೂಲಕ ಪ್ರಥಮ ಸ್ಥಾನ ಪಡೆದಿದೆ.
ಕುಷ್ಟಗಿಯ ನಾಗರಾಜ.ಕೆ‌.ಅವರ ನಾಯಕತ್ವದ ತಂಡ ೧೦ ಅಂಕಗಳನ್ನು ಪಡೆಯುವುದರ ಮೂಲಕ ದ್ವಿತೀಯ ಸ್ಥಾನ ಪಡೆದಿದೆ.
ಬೀರಪ್ಪ ಅಂಡಗಿ ಚಿಲವಾಡಗಿ ಅವರ ತಂಡದಲ್ಲಿ ಬೀರಪ್ಪ ಅಂಡಗಿ, ಬಸವರಾಜ ಮಾರನಬಸರಿ,ಮಂಜುನಾಥ ಎಚ್.,ನಾಗಪ್ಪ ದೇವನಾಳ,ಮಂಜುನಾಥ ಬುಲ್ಟಿ,ಚೆನ್ನಪ್ಪ ಶೆಟ್ಟರ್, ನಿಂಗಪ್ಪ ವಜ್ರಬಂಡಿ,ಹನುಮಂತಪ್ಪ ತಳವಾರ ಭಾಗವಹಿಸಿದ್ದರು.
ನಾಗರಾಜ.ಕೆ.ಅವರ ತಂಡದಲ್ಲಿ ನಾಗರಾಜ,ಕೊಟ್ರಯ್ಯಾ,ಬಸವರಾಜ ಟಕ್ಕಳಕಿ, ಪರಸಪ್ಪ ವಣಗೇರಿ,ಪಂಪಣ್ಣ.ಎಚ್.,ಹುಲಗಪ್ಪ ದೊಡ್ಡಮನಿ,ವಿರುಪಾಕ್ಷಪ್ಪ, ಪ್ರಶಾಂತ ಭಾಗವಹಿಸಿದ್ದರು.
ಪ್ರಥಮ ಸ್ಥಾನ ಹರ್ಷ,ಅಭಿನಂದನೆ: ವಿಕಲಚೇತನ ನೌಕರರ ಕ್ರೀಡಾಕೂಟದ ಕಬ್ಬಡ್ಡಿ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಹಾಗೂ ಅವರ ತಂಡವನ್ನು ಸರಕಾರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲೆಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ. ಆರ್.ಜುಮ್ಮಣ್ಣನ್ನವರ, ಗೌರವಾಧ್ಯಕ್ಷರಾದ ಮುಸ್ತಫಾ ಕುದರಿಮೊತಿ,ಖಜಾಂಚಿ ಸುಶೀಲೇಂದ್ರರಾವ ದೇಶಪಾಂಡೆ, ಕಾರ್ಯದರ್ಶಿ ಶಂಕರಗೌಡ ಮಾಲಿಪಾಟೀಲ,ಕಾರ್ಯಾಧ್ಯಕ್ಷರಾದ ಶಿವಪ್ಪ ಜೋಗಿ,ನಿರ್ದೇಶಕರಾದ ಗೋಪಾಲ‌ ಸೇರಿದಂತೆ ಅನೇಕರು ಹರ್ಷ ವ್ಯಕ್ತ ಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page