ಸೋಮವಾರ , ಜೂನ್ 5 2023
kn
Breaking News

ವಿದ್ಯುತ್ ಮಿತ ಬಳಕೆ ಮಾಡಿ : ಕುರಿ

Spread the love

ಮೂಡಲಗಿ: ಸಾರ್ವಜನಿಕರ ಸಿಬ್ಬಂದಿಗಳ ಮೇಲಾಧಿಕಾರಿಗಳ ಸಹಾಯ ಸಹಕಾರದೊಂದಿಗೆ, ಗ್ರಾಹಕರನ್ನು ರೈತರನ್ನು ವಿಶ್ವಾಸಕ್ಕೆ ತಗೆದುಕೊಂಡು ಉತ್ತಮ ಸೇವೆ ಸಲ್ಲಿಸುವದಾಗಿ ನೂತನ ಹಳ್ಳೂರ ಹೆಸ್ಕಾಂ ಶಾಖಾಧಿಕಾರಿ ಬಿ.ವಾಯ್ ಕುರಿ ಹೇಳಿದರು.
ಅವರು ಸಮೀಪದ ಮುನ್ಯಾಳ ಗ್ರಾ.ಪಂ ಕಾರ್ಯಾಲಯದಲ್ಲಿ ಜರುಗಿದ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಪ್ರಮುಖವಾಗಿ ರೈತ ದೇಶದ ಬೆನ್ನೆಲೆಬಾಗಿದ್ದಾರೆ. ಅನ್ನ ನೀಡುವ ರೈತರಿಗೆ ಪ್ರಮುಖವಾಗಿ ನೀರು, ಗೋಬ್ಬರ, ಭೀಜಗಳು ಅತ್ಯಾವಶ್ಯಕ. ನೀರು ಪಡೆಯಲು ವಿದ್ಯುತ್ ಬೇಕು, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿದರೆ ರೈತರು ವಿಫುಲವಾದ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ರೈತರಿಗೆ ಅವಶ್ಯಕವಿರುವ ವಿದ್ಯುತ್ ಸರಬರಾಜನ್ನು ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೋಳ್ಳುತ್ತೇವೆ. ರೈತರು ಗ್ರಾಹಕರು ಅವಶ್ಯಕತೆಗೆ ತಕ್ಕಂತೆ ವಿದ್ಯುತ್‍ನ್ನು ಹಿತಮಿತವಾಗಿ ಬಳಸಿ ಮಿತವ್ಯಯಿಯಾಗಿ ಬಳಕೆ ಮಾಡುವ ಮೂಲಕ ನಿಗಮಕ್ಕೆ ಸಹಾಯ ನೀಡಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಗ್ರಾ ಪಂ ಉಪಾಧ್ಯಕ್ಷ ಶಿವಾನಂದ ಬಿಳ್ಳೂರ, ಸದಸ್ಯರಾದ ಮಲ್ಲಪ್ಪ ಪಾಟೀಲ, ಸಂಜು ಹಿರೆಹೊಳಿ, ಹನಮಂತ ಸನದಿ, ರಾಜು ತಳವಾರ, ಸಂಜು ಜಂಬಗಿ ಮುಖಂಡರಾದ ಶಿವಾನಂದ ಮಡಿವಾಳರ, ಶಿವಾನಂದ ಮುಗುಳಖೋಡ, ಮಾರುತಿ ಹಂದಿಗುಂದ, ಮಂಜುನಾಥ ಒಂಟಗೂಡಿ, ಮಡ್ಡೆಪ್ಪ ವಡೆಯರ ಹಾಗೂ ಗ್ರಾಮಸ್ಥರು ಇದ್ದರು.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page