ಮೂಡಲಗಿ: ಸಾರ್ವಜನಿಕರ ಸಿಬ್ಬಂದಿಗಳ ಮೇಲಾಧಿಕಾರಿಗಳ ಸಹಾಯ ಸಹಕಾರದೊಂದಿಗೆ, ಗ್ರಾಹಕರನ್ನು ರೈತರನ್ನು ವಿಶ್ವಾಸಕ್ಕೆ ತಗೆದುಕೊಂಡು ಉತ್ತಮ ಸೇವೆ ಸಲ್ಲಿಸುವದಾಗಿ ನೂತನ ಹಳ್ಳೂರ ಹೆಸ್ಕಾಂ ಶಾಖಾಧಿಕಾರಿ ಬಿ.ವಾಯ್ ಕುರಿ ಹೇಳಿದರು.
ಅವರು ಸಮೀಪದ ಮುನ್ಯಾಳ ಗ್ರಾ.ಪಂ ಕಾರ್ಯಾಲಯದಲ್ಲಿ ಜರುಗಿದ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಪ್ರಮುಖವಾಗಿ ರೈತ ದೇಶದ ಬೆನ್ನೆಲೆಬಾಗಿದ್ದಾರೆ. ಅನ್ನ ನೀಡುವ ರೈತರಿಗೆ ಪ್ರಮುಖವಾಗಿ ನೀರು, ಗೋಬ್ಬರ, ಭೀಜಗಳು ಅತ್ಯಾವಶ್ಯಕ. ನೀರು ಪಡೆಯಲು ವಿದ್ಯುತ್ ಬೇಕು, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿದರೆ ರೈತರು ವಿಫುಲವಾದ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ರೈತರಿಗೆ ಅವಶ್ಯಕವಿರುವ ವಿದ್ಯುತ್ ಸರಬರಾಜನ್ನು ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೋಳ್ಳುತ್ತೇವೆ. ರೈತರು ಗ್ರಾಹಕರು ಅವಶ್ಯಕತೆಗೆ ತಕ್ಕಂತೆ ವಿದ್ಯುತ್ನ್ನು ಹಿತಮಿತವಾಗಿ ಬಳಸಿ ಮಿತವ್ಯಯಿಯಾಗಿ ಬಳಕೆ ಮಾಡುವ ಮೂಲಕ ನಿಗಮಕ್ಕೆ ಸಹಾಯ ನೀಡಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಗ್ರಾ ಪಂ ಉಪಾಧ್ಯಕ್ಷ ಶಿವಾನಂದ ಬಿಳ್ಳೂರ, ಸದಸ್ಯರಾದ ಮಲ್ಲಪ್ಪ ಪಾಟೀಲ, ಸಂಜು ಹಿರೆಹೊಳಿ, ಹನಮಂತ ಸನದಿ, ರಾಜು ತಳವಾರ, ಸಂಜು ಜಂಬಗಿ ಮುಖಂಡರಾದ ಶಿವಾನಂದ ಮಡಿವಾಳರ, ಶಿವಾನಂದ ಮುಗುಳಖೋಡ, ಮಾರುತಿ ಹಂದಿಗುಂದ, ಮಂಜುನಾಥ ಒಂಟಗೂಡಿ, ಮಡ್ಡೆಪ್ಪ ವಡೆಯರ ಹಾಗೂ ಗ್ರಾಮಸ್ಥರು ಇದ್ದರು.
