ಸೋಮವಾರ , ಜೂನ್ 5 2023
kn
Breaking News

ಹಳ್ಳೂರಲ್ಲಿ ದಿನಸಿ ಸಾಮಗ್ರಿಗಳ ವಿತರನೆ

Spread the love

ಹಳ್ಳೂರ: ಲಾಕ್ ಡೌನ್ ಘೋಷಣೆ ಮಾಡಿದ ಕಾರಣ ಬಡವರಿಗೆ ನಿತ್ಯದ ಊಟದ ಸಮಸ್ಯೆಯಾಗವಂತ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೋಳಿ ಅವರ ಬೆಂಬಲಿಗರು ಜಿಲ್ಲಾ ಪಂಚಾಯತ ಸದಸ್ಯ ವಾಸಂತಿ ತೇರದಾಳ ಇವರ ಪತಿ ಪಿಕೆಪಿಎಸ್ ಸದಸ್ಯ ಹಣಮಂತ ತೇರದಾಳ ಹಾಗೂ ಸಂಘಡಿಗರು ಮಾನವಿಯತೇ ಮೇರೆದಿದ್ದಾರೆ.
ಏ.14 ರ ವರೆಗೆ ಲಾಕ್ ಡೌನ್ ಘೋಷಣೆ ಹಿನ್ನೆಲೆಯಲ್ಲಿ ಆಧಿನಿವಾಸಿಗಳಿಗೆ, ನಿರೋದ್ಯೋಗಿಗಳಿಗೆ ಗೋವಿನ ಜೋಳ, ಅಕ್ಕಿ, ಗೋಧಿ ಹಿಟ್ಟು, ಕಾಲಿಪಲ್ಲೆ, ಕಲ್ಲಂಗಡಿ ಹಣ್ಣುಗಳನ್ನು ಸೇರಿದಂತೆ ದಿನಸಿ ಸಾಮಗ್ರಿಗಳನ್ನು ಮುಖಂಡರು ವಿತರಿಸಿದ್ದರು.
ಪಿಕೆಪಿಎಸ್ ಸದಸ್ಯ ಹಣಮಂತ ತೇರದಾಳ ಮಾತನಾಡಿ ಶಾಸಕ ಬಾಲಚಂದ್ರ ಜಾರಕಿಹೋಳಿ ಅವರ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ನಿರುದ್ಯೋಗ, ಬಡ ಜನರ ಏಳಿಗ್ಗೆಗೆ ಶ್ರಮಿಸಲಾಗುವುದು. ಅಲ್ಲದೇ ವೈರಸ್ಸ್‍ವನ್ನು ಹೋಗಲಾಡಿಸಲು ಎಲ್ಲರೂ ಮುಂಜಾಗ್ರತೆ ವಹಿಸಬೇಕೆಂದು ಹೇಳಿದರು.
ಪಿಕೆಪಿಎಸ್ ಅಧ್ಯಕ್ಷ, ಗ್ರಾಪಂ ಸದಸ್ಯ ಸುರೇಶ ಕತ್ತಿ, ಎನ್‍ಎಸ್‍ಎಫ್ ಅತಿಥಿ ಗೃಹದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ಪಿಡಿಓ ಹಣಮಂತ ತಾಳಿಕೋಟಿ ಹಾಗೂ ಗ್ರಾಪಂ ಸದಸ್ಯರು ಮಾಸ್ಕ್ ವಿತರಿಸಿದ್ದರು.
ಈ ಸಂದರ್ಭದಲ್ಲಿ ಸದಸ್ಯ ಮಲ್ಲಪ್ಪ ಛಬ್ಬಿ, ಸುರೇಶ ಡಬ್ಬನ್ನವರ, ಮಾರುತಿ ಮಾವರಕರ, ಬಿ.ಜಿ.ಸಂತಿ, ಬಸಪ್ಪ ಹಡಪದ, ಕುಮಾರ ಲೋಕಣ್ಣವರ, ಅಡಿವೆಪ್ಪ ಚನ್ನಬಸಪ್ಪಗೋಳ, ಸಿದ್ದಣ್ಣ ದುರದುಂಡಿ, ಬಾಳೇಶ ನೇಸೂರ, ಸಂಗಪ್ಪ ಪಟ್ಟಣಶೆಟ್ಟಿ, ಭೀಮಪ್ಪ ಹೊಸಟ್ಟಿ, ತುಕಾರಾಮ ಸನದಿ, ಅಶೋಕ ಬಾಗಡಿ, ಅಪ್ಪಯ್ಯ ರಡೇರಟ್ಟಿ, ಮಲ್ಲಪ್ಪ ಕೊಂಗಾಲಿ, ಮಹಾದೇವ ಹೋಸಟ್ಟಿ, ಮಹಾವಿರ ಛಬ್ಬಿ, ಈರಪ್ಪ ಪಾಲಭಾಂವಿ, ಶಿವಪ್ಪ ಕೌಜಲಗಿ, ಅಡಿವೆಪ್ಪ ಪಾಲಭಾಂವಿ, ಬಸವರಾಜ ಲೋಕಣ್ಣವರ, ಮಾರುತಿ ಸಿದ್ದಾಪುರ, ಇಬ್ರಾಹಿಂ ಮುಜಾವರ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page