ಗುರುವಾರ , ಮೇ 2 2024
kn
Breaking News

ಬೆಳಗಾವಿ

ಕನ್‍ಪ್ಯೂಸ್ ಮಾಡ್ಕೋಬೇಡಿ. ತಪ್ಪು ದಾರಿ ಹಿಡಿಬೇಡಿ. ಮಂಗಳಾ ಅಂಗಡಿ ಬೆಂಬಲಿಸಿ-ಕಮಲ ಅರಳಿಸಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಕುಟುಂಬವೇ ಬೇರೆ. ರಾಜಕಾರಣವೇ ಬೇರೆ. ಕಾರ್ಯಕರ್ತರು ಏ-17 ರಂದು ನಡೆಯುವ ಈ ಉಪಚುನಾವಣೆಯಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೇ ದೇಶದ ಸಮಗ್ರತೆ, ಸುರಕ್ಷತೆ ಹಾಗೂ ಅಭಿವೃದ್ದಿ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರಿಗೆ ಮತ ಚಲಾಯಿಸಿ ಆಶೀರ್ವಾದ ಮಾಡಬೇಕೆನ್ನುವ ಮೂಲಕ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಊಹಾ-ಪೋಹಗಳಿಗೆ ಕೆಎಮ್‍ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೆರೆ ಎಳೆದರು. ಸೋಮವಾರದಂದು ಸಂಜೆ ನಗರದ ಹೊರವಲಯದಲ್ಲಿರುವ …

Read More »

ಬಿಜೆಪಿ ಅಭ್ಯರ್ಥಿ ಮಂಗಳಾ ಸು. ಅಂಗಡಿ ಪರ ಮತಯಾಚಿಸಿದ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ

ಹಳ್ಳೂರ: ದೇಶದ ಅಭಿವೃದ್ದಿಪರ ಕಾರ್ಯ ಮಾಡುತ್ತಿರುವ ಮೋದಿಜಿಯವರ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿ ಮಂಗಳಾ ಸು. ಅಂಗಡಿ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಪ್ರವೃತ್ತರಾಗಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು. ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ನಿಮಿತ್ಯ ಹಳ್ಳ್ಳೂರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಗಳಾ ಸು. ಅಂಗಡಿ ಅವರ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಿಲ್ಲೆಯ ಸಮಗೃ …

Read More »

ಆಪರೇಶನ್ ಕಮಲ ಮಾಡಲು ಒಬ್ಬ ಶಾಸಕನಿಗೆ 40ಕೋಟಿಯಂತೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಮದುರ್ಗ: ಜನವಿರೋಧಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮೇಲಿರುವ ಸಿಟ್ಟನ್ನು ಹೊರ ಹಾಕಲು ಜನತೆಗೆ ಈ ಉಪಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವ ಮೂಲಕ ಉಭಯ ಸರಕಾರಗಳಿಗೆ ಎಚ್ಚರಿಕೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತದಾರರಿಗೆ ಕರೆ ನೀಡಿದರು . ಪಟ್ಟಣದ ತೇರ ಬಜಾರದಲ್ಲಿ ಬೆಳಗಾವಿಯ ಲೋಕಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ ಪ್ರಚಾರ …

Read More »

ಡಾ. ಅಶೋಕ ದಳವಾಯಿಯವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ

ಮೂಡಲಗಿ: ಭಾರತ ಸರಕಾರದ ಕೃಷಿ ಮಂತ್ರಾಲಯದಲ್ಲಿ ಸೇವೆ ಸಲ್ಲಿಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಗಳಾದ ಡಾ. ಅಶೋಕ ದಳವಾಯಿಯವರಿಗೆ ಗದಗನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ವಿಸ್ವವಿದ್ಯಾಲಯ ದಿಂದ ಏ. 10 ರಂದು ಪ್ರಥಮ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಲಿದ್ದಾರೆ. ದಳವಾಯಿಯವರು ಕೃಷಿ, ಗ್ರಾಮೀಣಾಭಿವೃದ್ಧಿ ಹಾಗೂ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ವಿಶ್ವ ವಿದ್ಯಾಲಯವು ಪ್ರಥಮ ಘಟಿಕೋತ್ಸವದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. 2017 …

Read More »

ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪೋನ್ ಸಂವಾದ ಕಾರ್ಯಕ್ರಮ

ಮೂಡಲಗಿ: ಉಪನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿ ಇವರ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಜಿಲ್ಲಾ ಮಟ್ಟದ ಫೋನ್ ಸಂವಾದ ಕಾರ್ಯಕ್ರಮವು ಏ. 10 ಶನಿವಾರದಂದು ಸಾಂಯಕಾಲ 3-00 ಗಂಟೆಯಿಂದ 5 ಘಂಟೆಯವರೆಗೆ ಜರುಗಲಿದೆ. ಮೂಡಲಗಿ ತಾಲೂಕಿನ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿಯ ಕ್ಲಿಷ್ಠಾಂಶಗಳು ಹಾಗೂ ಪರೀಕ್ಷೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು ನೂರಿತ ವಿಷಯ ಸಂಪನ್ಮೂಲ ಶಿಕ್ಷಕರನ್ನು ನಿಯಮಿಸಿದ್ದು, ವಿದ್ಯಾರ್ಥಿಗಳು ಈ …

Read More »

ಸಾಲಹಳ್ಲಿ ಗ್ರಾಮದಲ್ಲಿ ನಡೆದ ಬಿಜೆಪಿ ಲೋಕಸಭಾ ಅಭ್ಯರ್ಥಿಪರ ಬಹಿರಂಗ ಪ್ರಚಾರ ಸಭೆಗೆ ಚಾಲನೆ ನೀಡಿದ ಸಿ.ಎಂ ಬಿ.ಎಸ.ವಾಯ್

ರಾಮದುರ್ಗ: ಬೆಳಗಾವಿ ಜಿಲ್ಲೆಯ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಶ್ರೀಮತಿ ಮಂಗಳಾ ಸುರೇಶ್ ಅಂಗಡಿ ಅವರ ರಾಮದುರ್ಗ ವಿಧಾನಸಭಾ ಕ್ಷೇತ್ರ ಪ್ರಚಾರಾರ್ಥ ಸಭೆಯನ್ನು ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಬಬಲಾದಿ ಮಠದ ಆವರಣದಲ್ಲಿ ಪ್ರಚಾರ ಸಭೆ ಜರುಗಿತು. ಈ ಸಭೆಯ ಉದ್ಘಾಟನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರು ಮತ್ತು ಸಂಸದಿಯ ವ್ಯವಹಾರ ಸಚಿವರುರಾದ ಪ್ರಲ್ಹಾದ ಜೋಶಿ ಮತ್ತು ವೇದಿಕೆಯ ಮೇಲೆ ಹಾಜರಿದ್ದ ಗಣ್ಯರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು. …

Read More »

ಅವರಾದಿಯ ಶ್ರೀ ಗುರು ಲೀಲಾಯೋಗಿ ಮೂಲ ಫಲಹಾರೇಶ್ವರರ 189 ನೇ ಪುಣ್ಯ ಸ್ಮರಣೆ ಪ್ರಯುಕ್ತ ಅನ್ನ ಸಂತರ್ಪಣೆ

ರಾಮದುರ್ಗ: ತಾಲೂಕಿನ ಸುಕ್ಷೇತ್ರ ಅವರಾದಿಯ ಶ್ರೀ ಗುರು ಲೀಲಾಯೋಗಿ ಮೂಲ ಫಲಹಾರೇಶ್ವರರ 189 ನೇ ಪುಣ್ಯ ಸ್ಮರಣೆ ಪ್ರಯುಕ್ತ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಶ್ರೀಮತಿ ಪಾರ್ವತಮ್ಮ ಸುಬ್ರಾಯಪ್ಪ ಮೋಟೆ ಇವರ ಆಶಯದಂತೆ ಅವರ ಮಗನಾದ ವಿಶೇಷಚೇತನ ಶ್ರೀ ಮಹೇಶ ಸುಬ್ರಾಯಪ್ಪ ಮೋಟೆ ಯವರು ವೃತ್ತಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿದು ರಾಮದುರ್ಗ ನಗರದ ಹೆಡ್ ಪೋಸ್ಟ್ ಆಫೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಇವರು ಕಲೆ ಸಾಹಿತ್ಯ ಸಂಗೀತ ಡೋಳಿನ ಮೇಳ ಗಳಲ್ಲು ಇವರ …

Read More »

ರಾಷ್ಟ್ರ ಬದಲಾವಣೆ ಮಾಡುತ್ತೆವೆಂದು ಹೇಳಿ ಜನರ ಕಣ್ಣಿಗೆ ಮಣ್ಣೆರೆಚುತ್ತಿರುವ ಕೇಂದ್ರ ಸರಕಾರ : ಎಚ್.ಎಮ್ ರೇವಣ್ಣ

ಮೂಡಲಗಿ: ಕಳೆದ ಎಳು ವರ್ಷಗಳಿಂದ ರಾಷ್ಟ್ರ ಬದಲಾವಣೆ ಮಾಡುತ್ತೆ ಎಂದು ಹೇಳಿ ಜನರ ಕಣ್ಣಿಗೆ ಮಣ್ಣ ಎರಚ್ಚಿ ಸುಳ್ಳ ಹೇಳುತ್ತಿರುವ ಕೇಂದ್ರ ಸರಕಾರದಲ್ಲಿ ಜನ ಸಮಾನ್ಯರ ಪರ ಧ್ವನಿ ಎತ್ತಲು ಸರಳ ಸಜ್ಜನಿಕೆ ವ್ಯಕ್ತಿ ಸತೀಶ ಜಾರಕಿಹೊಳಿ ಅವರನ್ನು ಲೋಕಸಭೆಗೆ ದಾಖಲೆ ಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು. ಬುಧವಾರದಂದು ಪಟ್ಟಣದ ಅಂಬೇಡ್ಕರ ಭವನದಲ್ಲಿ ಜರುಗಿದ ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೇಸ್ ಅಭ್ಯರ್ಥಿ ಪರ ಮತಯಾಚನೆಯಲ್ಲಿ …

Read More »

ದೇಶದ ಸಮಗ್ರತೆ ಹಾಗೂ ಭಾರತವನ್ನು ಜಗತ್ತಿನಲ್ಲಿಯೇ ಶಾಲಿ ರಾಷ್ಟ್ರವನ್ನಾಗಿಸಲು ಬಿಜೆಪಿ ಬೆಂಬಲಿಸಿ : ಪ್ರಲ್ಹಾದ ಜೋಶಿ

ಮೂಡಲಗಿ: ದೇಶದ ಸಮಗ್ರತೆ ಹಾಗೂ ಭಾರತವನ್ನು ಜಗತ್ತಿನಲ್ಲಿಯೇ ಶಕ್ತಿ ಶಾಲಿ ರಾಷ್ಟ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯೊನ್ಮೂಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಸುಸಂಸ್ಕøತ ಮನೆತನದ ಹಾಗೂ ಗೋಕಾಕ ನಾಡಿನ ಮನೆ ಮಗಳಾದ ಮಂಗಳಾ ಸುರೇಶ ಅಂಗಡಿ ಅವರನ್ನು ಲೋಕಸಭೆಗೆ ಆಯ್ಕೆಮಾಡಿ ಕಳುಹಿಸುವಂತೆ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿಕೊಂಡರು. ಇಲ್ಲಿಯ ಬಸವ ಮಂಟಪದಲ್ಲಿ ಸೋಮವಾರ ಸಂಜೆ ಜರುಗಿದ ಬೆಳಗಾವಿ …

Read More »

ಅರುಣ ರೊಟ್ಟಿಗೆ ಪಿಎಚ್.ಡಿ. ಪದವಿ

ಮೂಡಲಗಿ: ಅರುಣ ಅಣ್ಣಾಸಾಹೇಬ ರೊಟ್ಟಿ ಅವರು ಮ್ಯಾನೇಜ್‍ಮೆಂಟ್ ಸ್ಟಡೀಸ್ ವಿಷಯದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಡಾ. ಬಸವರಾಜ ಎಸ್. ಕುಡಚಿಮಠ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ಮಹಾಪ್ರಬಂಧವನ್ನು ಪರಿಗಣಿಸಿ ಪಿಎಚ್.ಡಿ. ಪದವಿಯನ್ನು ನೀಡಿರುವರು. ಇತ್ತಿಚೆಗೆ ಜರುಗಿದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕುಲಪತಿ ಪ್ರೊ. ಕರಿಸಿದ್ದಪ್ಪ ಹಾಗೂ ಕೇಂದ್ರ ರಕ್ಷಣಾ ಸಚಿವಾಲಯದ ವೈಜ್ಞಾನಿಕ ಮಾಜಿ ಸಲಹೆಗಾರ ಡಾ. ವಿ.ಕೆ. ಅತ್ರೆ ಅವರು ಅರುಣ ರೊಟ್ಟಿ ಅವರಿಗೆ ಪಿಎಚ್.ಡಿ. ಪದವಿ ಪ್ರಧಾನ ಮಾಡಿರುವರು.

Read More »

You cannot copy content of this page