ಶುಕ್ರವಾರ , ಏಪ್ರಿಲ್ 19 2024
kn
Breaking News

ಬೆಳಗಾವಿ

ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ : ಬಾಲಚಂದ್ರ ಜಾರಕಿಹೊಳಿ

ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ ಅಧಿಕಾರಿಗಳನ್ನುದ್ಧೇಶಿಸಿ ದೂರವಾಣಿಯಲ್ಲಿ ಮಾತನಾಡಿದರು. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಸಕಲ ಸೌಲಭ್ಯಗಳನ್ನೊಳಗೊಂಡ ಮಾದರಿ …

Read More »

ಸುಧಾರಿತ ಬೀಜಗಳಿಂದ ಮೇವಿನ ಉತ್ಪಾದನೆ ಜೊತೆ ಆರ್ಥಿಕವಾಗಿ ಸಬಲರಾಗಿ : ಮಲ್ಲಪ್ಪ ಪಾಟೀಲ

ಗೋಕಾಕ : ದನಕರುಗಳಿಗೆ ಅಗತ್ಯ ಬೇಕಾಗುವ ಮೇವನ್ನು ಪೂರೈಸಿಕೊಂಡು ಉತ್ಪಾದನೆಯ ಜೊತೆ ಆರ್ಥಿಕವಾಗಿ ಸಬಲರಾಗಬೇಕು. ಕೆ.ಎಮ್.ಎಫ್‍ದಿಂದ ಕೊಡಲ್ಪಡುವ ಬೀಜಗಳು ಸುಧಾರಿತವಾದ್ದು, ಕೃಷಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೆಶಕ ಮಲ್ಲಪ್ಪ ಪಾಟೀಲ ಹೇಳಿದರು. ಅವರು ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಎನ್.ಎಸ್.ಎಫ್ ಅತಿಥಿ ಕಛೇರಿಯಲ್ಲಿ ಜರುಗಿದ ಕೆ.ಮ್.ಎಫ್ ದಿಂದ ಹಾಲು ಉತ್ಪಾದಕ ಸಹಕಾರಿ ಸಂಘಗಳ ಮೂಲಕ ಹಾಲು ಪೂರೈಸುತ್ತಿರುವ ರೈತರಿಗೆ ಉಚಿತ ಮೇವಿನ ಬೀಜಗಳ ವಿತರಣಾ ಕಾರ್ಯಕ್ರಮದಲ್ಲಿ …

Read More »

ಜನರ ಜೀವ ಅಮೂಲ್ಯ, ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು : ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಜನರ ಜೀವ ಅಮೂಲ್ಯವಾದದ್ದು. ಅದನ್ನು ರಕ್ಷಿಸಿಕೊಳ್ಳುವತ್ತ ಸಾರ್ವಜನಿಕರು ಗಮನಹರಿಸಬೇಕು. ರೋಗದ ಲಕ್ಷಣಗಳು ಕಂಡು ಬಂದಲ್ಲಿ ವಿಳಂಬಕ್ಕೆ ಅವಕಾಶವಿಲ್ಲದಂತೆ ಕೋವಿಡ್ ಪರೀಕ್ಷೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಾ ಟಾಸ್ಕ್‍ಪೋರ್ಸ್ ಕಮೀಟಿ 3ನೇ ಸಭೆಯನ್ನು ಉದ್ಧೇಶಿಸಿ ಮಾತನಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗೋಕಾಕ …

Read More »

ಅನಗತ್ಯವಾಗಿ ತಿರಗಾಡಬೇಡಿ, ಕೊವೀಡ್ – 19 ನಿಯಮಾನುಸಾರ ದಂಡ : ಪಿಎಸ್ಐ ಬಾಲದಂಡಿ

ಮೂಡಲಗಿ: ಕೊರೋನಾ ಮಹಾಮಾರಿ ಹಿಮ್ಮೆಟ್ಟಿಸಲು ಸಾಮಾಜಿಕ ಅಂತರ ಮಾಸ್ಕ್ ಉಪಯೋಗಿಸಿ ಅಗತ್ಯವಿದ್ದಲ್ಲಿ ಮಾತ್ರ ಹೋರ ಬರಬೇಕು. ಅನಗತ್ಯವಾಗಿ ತಿರಗಾಡ ಬೇಡಿ, ವಾಹನ ಸವಾರರು ಅನವಶ್ಯಕವಾಗಿ ತಿರುಗುವವರ ಮೇಲೆ ಕೊವೀಡ-19 ನಿಯಮಾನುಸಾರ ದಂಡವನ್ನು ವಿಧಿಸಲಾಗುತ್ತಿದೆ ಎಂದು ಮೂಡಲಗಿ ಪೊಲೀಸ್ ಠಾಣೆಯ ಪಿಎಸ್‍ಐ ಹಾಲಪ್ಪ ಬಾಲದಂಡಿ ಹೇಳಿದರು. ಅವರು ನಗರದಲ್ಲಿ ವಾರಾಂತ್ಯದ ಕೊರೋನಾ ಕರ್ಫೋ ಹಿನ್ನೆಲೆ ಎರಡನೇಯ ದಿನದಂದು ಅನವಶ್ಯಕವಾಗಿ ತಿರುಗುವವರಿಗೆ ದಂಡ ವಿಧಿಸಿ, ಸರಕಾರ ಜಾರಿಗೋಳಿಸುವ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. …

Read More »

ತಾಲೂಕಾಡಳಿತದಿಂದ ಸಕಲ ಸಿದ್ದತೆ : ಡಾ ಬೆನಚನಮರಡಿ

ಮೂಡಲಗಿ: ಕೊರೋನಾ ಮಹಾ ಮಾರಿಯಿಂದ ಜನ ಜೀವನ ಮೇಲೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ತಾಲೂಕಾಡಳಿತದಿಂದ ಸಕಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನಿವೃತ್ತ ತಾಲೂಕಾ ವೈದ್ಯಾಧಿಕಾರಿ ಡಾ. ಆರ್.ಎಸ್ ಬೆನಚನಮರಡಿ ಹೇಳಿದರು. ಅವರು ಶನಿವಾರದಂದು ಮೂಡಲಗಿ ಹಾಗೂ ಮಲ್ಲಾಪೂರ ಪಿಜಿ ಗ್ರಾಮಗಳ ಆರೋಗ್ಯ ಕೇಂದ್ರಗಳ ನಿಗದಿನ ಕೊವೀಡ್ ಕೇಂದ್ರಗಳಿಗೆ ಭೇಟಿ ನೀಡಿ ಕೈಗೊಂಡ ಕ್ರಮಗಳನ್ನು ತಾಲೂಕಾ ತಂಡದೊಂದಿಗೆ ತೆರಳಿ ಪರಿಶೀಲಿಸಿ ಮಾತನಾಡಿದ ಅವರು, ಕೆ.ಎಮ್.ಎಫ್ ಅಧ್ಯಕ್ಷರು, ಅರಭಾಂವಿ ಶಾಸಕರಾದ …

Read More »

ಮೂಡಲಗಿಯಲ್ಲಿ ಸಿದ್ಧ ಸಮಾಧಿ ಯೋಗ ಶಿಬಿರ

ಮೂಡಲಗಿ: ಮನುಷ್ಯನ ಮಾನಸಿ, ದೈಹಿಕ ಹಾಗೂ ವಿಚಾರವಂತರಾಗಿಸಲು ಅತ್ಯಂತ ಉಪಯುಕ್ತವಾಗಿರುವ ಸಿದ್ಧ ಸಮಾಧಿ ಯೋಗ ಶಿಬಿರವನ್ನು ನಗರದ ಆರಾಧ್ಯ ದೈವ ಶ್ರೀ ಶಿವಬೋಧ ರಂಗ ಮಠದಲ್ಲಿ ಬೆಂಗಳೂರಿನ ಋಷಿ ಸಂಸ್ಕøತಿ ವಿದ್ಯಾ ಕೇಂದ್ರ ಶಾಖೆ ಮೂಡಲಗಿ ಇವರ ಆಶ್ರಯದಲ್ಲಿ ಏ. 18 ರವಿವಾರ ಸಾಂಯಕಾಲ 6-00 ಗಂಟೆಗೆ ಪರಿಚಯ ಕಾರ್ಯಕ್ರಮ, ಏ. 19 ರಿಂದ ತರಗತಿಗಳು ಪ್ರಾರಂಭವಾಗುವದು. ಯೋಗ ಗುರುಜೀ ಅರುಣ ತಿಕೋಟಿಕರ ಗುರುಜೀ ಆಗಮಿಸಲಿದ್ದಾರೆ ಎಂದು ಸಂಘಟಕರಾದ ಪುಲಕೇಶಿ …

Read More »

ಪಂಚಮಸಾಲಿ ಮುಖಂಡರಿಂದ ಮುಖ್ಯಮಂತ್ರಿಗೆ ಮನವಿ: ಕಡೆಗಣಿಸಲ್ಪಟ್ಟರೆ ನಿರಾಣಿ

ಮೂಡಲಗಿ – ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಕೇಳುವ ತಮ್ಮ ನ್ಯಾಯಯುತ ಬೇಡಿಕೆ ಬೇಗನೆ ಈಡೇರಿಸಬೇಕೆಂದು ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮಿತಿಯ ವತಿಯಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ಕಾರ್ಯಕ್ಕಾಗಿ ಆಗಮಿಸಿದ್ದ ಸಿಎಂ ಅವರಿಗೆ ಪಂಚಮಸಾಲಿ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು. ̺ಕೃಷಿ ಕುಟುಂಬದಿಂದ ಬಂದಿರುವ ಪಂಚಮಸಾಲಿ ಲಿಂಗಾಯತ ಸಮುದಾಯವು ಶೈಕ್ಷಣಿಕ ವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಹಿಂದುಳಿದ ಸಮಾಜವಾಗಿದ್ದು …

Read More »

ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸಾರಥ್ಯದಲ್ಲಿ ಬಿಜೆಪಿಯ ಕಮಲ ಅರಳಿದೆ : ಬಾಲಚಂದ್ರ ಜಾರಕಿಹೊಳಿ

ಗೋಕಾಕ: ದೇಶದಾಧ್ಯಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಸಾರಥ್ಯದಲ್ಲಿ ಬಿಜೆಪಿಯ ಕಮಲ ಅರಳಿದ್ದು, ರಾಷ್ಟ್ರದ ಪ್ರಗತಿಯ ಹಿತದೃಷ್ಟಿಯಿಂದ ಹಾಗೂ ಬೆಳಗಾವಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗಾಗಿ ಬಿಜೆಪಿ ಬೆಂಬಲಿಸಿ ಕೇಂದ್ರ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಧರ್ಮಪತ್ನಿ ಮಂಗಳಾ ಅಂಗಡಿಯವರಿಗೆ ಆಶೀರ್ವಾದ ಮಾಡುವಂತೆ ಕೆಎಮ್‌ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಕೋರಿದರು. ಮಂಗಳವಾರದoದು ಸಂಜೆ ಇಲ್ಲಿಗೆ ಸಮೀಪದ ಮೆಳವಂಕಿ ಗೌಡನ ಕ್ರಾಸ್) …

Read More »

ಡಾ.ಬಾಬಾಸಾಹೇಬ ಅಂಬೇಡ್ಕರ ರವರ 130ನೇ ಜಯಂತಿ ಆಚರಿಸಲಾಯಿತ್ತು

ಹಳ್ಳೂರ: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಅವರು ಸಮಾಜಕ್ಕೆ ಶಿಕ್ಷಣ, ಸಂಘಟನೆ, ಹೋರಾಟ, ಶೈಕ್ಷಣಿಕ ಬೆಳವಣಿಗೆಗೆ ಮಹತ್ವ ನೀಡಿದ ಅವರು ನೀಡಿರುವ ಕೋಡುಗೆ ಅಪಾರ ಅನೇಕ ಮಹಾ ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೋಳ್ಳಬೇಕು ಹಾಗೂ ಅವರ ತತ್ವ ಆಚಾರ ವಿಚಾರವನ್ನು ಪ್ರತಿಯೊಬ್ಬರು ಪ್ರೇರಿಪಿಸಿಕೊಳ್ಳಬೇಕೆಂದು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿಯ ಬೆಳಗಾವಿ ಜಿಲ್ಲಾಧ್ಯಕ್ಷ ಮಾರುತಿ ನಾ. ಮಾವರಕರ ಹೇಳಿದರು. ಡಾ.ಬಾಬಾಸಾಹೇಬ …

Read More »

ಬಿಜೆಪಿ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೇಸ್ಸಿಗಿಲ್ಲ, ನಮ್ಮದು ದೇಶ ಪ್ರೇಮಿ ಪಕ್ಷ ಬಿಜೆಪಿ – ಸಚಿವ ಈಶ್ವರಪ್ಪ ರಾಜಾಪೂರ, ವಡೇರಹಟ್ಟಿ, ಕುಲಗೋಡ, ಬೆಟಗೇರಿ ಗ್ರಾಮಗಳಲ್ಲಿ ಸಚಿವ ಈಶ್ವರಪ್ಪ ಮಂಗಳಾ ಅಂಗಡಿ ಪರ ಮತಯಾಚನೆ

ಘಟಪ್ರಭಾ: ಈ ಚುನಾವಣೆ ವ್ಯಕ್ತಿಗಳ ನಡುವಿನ ಚುನಾವಣೆಯಲ್ಲ. ಪಕ್ಷಗಳ ಮಧ್ಯ ನಡೆಯುತ್ತಿರುವ ಉಪ ಚುನಾವಣೆ. ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿಯವರ ಪಾರದರ್ಶಕ ಆಡಳಿತವನ್ನು ಮೆಚ್ಚಿ ಕೊಂಡಾಡುತ್ತಿರುವ ಸಮಯದಲ್ಲಿ ಮೋದಿಯವರ ಬಗ್ಗೆ ಏಕ ವಚನದಲ್ಲಿ ಮಾತನಾಡುತ್ತಿರುವ ಮಾಜಿ ಸಿಎಂ ಸಿದ್ಧರಾಮಯ್ಯನವರ ನೈತಿಕತೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು. ಸೋಮವಾರದಂದು ಸಮೀಪದ ರಾಜಾಪೂರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಪರ ಮತಯಾಚಿಸಿ ಮಾತನಾಡಿದ ಅವರು, ದೇಶಪ್ರೇಮ …

Read More »

You cannot copy content of this page