ಬುಧವಾರ , ಮೇ 31 2023
kn
Breaking News

ಖ್ಯಾತ ಉದ್ಯಮಿ ಚಿಕ್ಕರೇವಣ್ಣರವರ ಅಭಿಮಾನಿ ಬಳಗದಿಂದ “ಹಸಿದವರಿಗೆ ಅನ್ನ”

Spread the love

ರಾಮದುರ್ಗ: ರಾಜ್ಯಾದ್ಯಂತ 14 ದಿನ ಲಾಕ್ ಡೌನ್ ಘೋಷಣೆಯಾದ ಹಿನ್ನಲೆಯಲ್ಲಿ 5 ನೇ ದಿನವಾದ ಇಂದು ಶ್ರೀ ಚಿಕ್ಕರೇವಣ್ಣರವರು ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕರು ರಾಮದುರ್ಗ ಅವರ ಪರವಾಗಿ ಅವರ ಅಭಿಮಾನಿ ಬಳಗದಿಂದ “ಹಸಿದವರಿಗೆ ಅನ್ನ”.

ರಾಮದುರ್ಗ ನಗರದ ಹಲವು ಭಾಗಗಳಲ್ಲಿ ಆಹಾರದ ಅವಶ್ಯಕತೆ ಇರುವವರಿಗೆ “ಹಸಿದವರಿಗೆ ಅನ್ನ” ಎಂಬ ಕಾರ್ಯಕ್ರಮದಡಿ ಐದನೇ ದಿನ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್ ಹಾಗೂ ಮಾಸ್ಕ್ ಗಳನ್ನು ನಗರದ ಬಸ್ ನಿಲ್ದಾಣ, ರಾಮದುರ್ಗ ಪೊಲೀಸ್ ಠಾಣೆ ಸಿಬ್ಬಂದಿ ವರ್ಗದವರಿಗೆ, ಸರ್ಕಾರಿ ಆಸ್ಪತ್ರೆಯ ಸಿಬಂದಿ ವರ್ಗದವರಿಗೆ , ರೋಗಿಗಳ ಸಂಬಂಧಿಗಳಿಗೆ, APMC ಕಾರ್ಮಿಕರಿಗೆ ಹಾಗೂ ಆಹಾರದ ಅವಶ್ಯಕತೆ ಇರುವವರಿಗೆ ಆಹಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಚಿಕ್ಕರೇವಣ್ಣರವರು ಖ್ಯಾತ ಉದ್ಯಮಿಗಳು ಹಾಗೂ ಸಮಾಜ ಸೇವಕರು ರಾಮದುರ್ಗ ಅವರ ಅಭಿಮಾನಿ ಬಳಗದಿಂದ ಬಿ ಆರ್ ದೊಡಮನಿ ಹಾಗೂ ನಿಂಗಪ್ಪ ಕರಿಗಾರ ,ಬಸಪ್ಪ ಶೇಡಬಾಳ ,ಸಂಗಪ್ಪ ನರನೂರ, ಶಫಿ ಫನಾಲಾಗಡ್, ಹಣಮಂತ ಯರಗಟ್ಟಿ,ಸಂಜು ಬಿರಸಿದ್ದಿ,ಕೆಂಪಣ್ಣ ಜಂಜೇಲಿ, ಮಹೇಶ್ ಜಂಜೇಲ, ಹಾಗೂ ಶ್ರೀ ಚಿಕ್ಕರೇವಣ್ಣನವರ ಆಪ್ತ ಸಹಾಯಕರಾದ ಮಾಳಿಂಗರಾಯ ಹಾಗೂ ಶ್ರೀ ಚಿಕ್ಕರೇವಣ್ಣನವರ ಆಫೀಸ್ ಸಿಬ್ಬಂದಿ ವರ್ಗದವರು ಇದ್ದರು.

ವರದಿ. ಶ್ರೀಕಾಂತ ಪೂಜಾರ್


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page