ಗುರುವಾರ , ಜೂನ್ 8 2023
kn
Breaking News

ಸಾರ್ವಜನಿಕರ ಕೆಲಸವಾಗಲು ನೌಕರರ ಇಚ್ಚಾಶಕ್ತಿ ಅವಶ್ಯಕ : ಸುಭಾಸ ರಡ್ಡೇರಟ್ಟಿ

Spread the love


ಮೂಡಲಗಿ: ಸರಕಾರಿ ಕಛೇರಿಗಳಾದ ತಹಶೀಲ್ದಾರ, ತಾಲೂಕ ಪಂಚಾಯತ, ಪೋಲಿಸ್, ಸಾರಿಗೆ, ನೊಂದಣಿ, ಎಪಿಎಮ್‍ಸಿ ಮುಂತಾದ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸರಾಗವಾಗಿ ಸಾಗಲು ಅಲ್ಲಿಯ ನೌಕರರ ಇಚ್ಛಾ ಶಕ್ತಿ ಅವಶ್ಯಕವಾಗಿದೆ. ಭ್ರಷ್ಟಾಚಾರ ನಡೆಸುವ ಸಲುವಾಗಿ ಕೇಲವು ಕಛೇರಿಗಳಲ್ಲಿ ಮದ್ಯವರ್ತಿಗಳ ಸಹಾಯದಿಂದ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವದು ಕಂಡು ಬರುತ್ತಿದೆ ಎಂದು ಜೈಹೋ ಜನತಾ ವೇದಿಕೆ ತಾಲೂಕಾಧ್ಯಕ್ಷ ಸುಭಾಸ ರಡ್ಡರಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಮಾಶಾಸನ, ಜಾತಿ ಆದಾಯ ಪ್ರಮಾಣ ಪತ್ರ, ಉದ್ಯೋಗ ಖಾತ್ರಿ, ವಸತಿ ನಿವೇಶನ, ವಾಹನ ನೊಂದಣಿ, ನವಿಕರಣ, ಚಾಲನಾ ಪರವಾನಿಗೆ, ನಿವೇಶನ, ಜಮೀನು ಖರೀದಿ, ವರ್ಗಾವಣೆ, ರೈತರಿಗೆ ಬೆಂಬಲ ಬೆಲೆಯಂತಹ ಕಾರ್ಯಗಳಲ್ಲಿ ಮದ್ಯವರ್ತಿಗಳ ಹಾವಳಿಯಿಂದಾಗಿ ನೀಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಕೊಡಲೇ ಸಂಬಂಧಿಸಿದ ಇಲಾಖಾ ಮುಖ್ಯಸ್ಥರು ತಮ್ಮ ಸಿಬ್ಬಂದಿಯವರ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ಜರುಗಿಸಬೇಕು. ಯಾವುದೇ ಕ್ರಮ ಕೈಗೋಳ್ಳದಿದ್ದರೆ ಸಂಘಟನೆಯ ಮೂಲಕ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವದಾಗಿ ತಿಳಿಸಿದ್ದಾರೆ.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page