ಮೂಡಲಗಿ: ತಾಲೂಕಿನ ನಾಗನೂರ ಗ್ರಾಮದಲ್ಲಿ ಉಪ್ಪಾರ ಸಮುದಾಯದ ಜನರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ. ಮೈತ್ರೇಯ ನೇತೃತ್ವದ ತಜ್ಞರ ತಂಡ ಆಗಮಿಸಿ ಸಮಾಜದ ಸಾಮಾಜಿಕ, ಆರ್ಥಿಕ ಸ್ಥತಿಗತಿ ಅಧ್ಯಯನ ನಡೆಸಿ ಮಾಹಿತಿ ಕಲೆಹಾಕಿದರು
ನಂತರ ಪ್ರೋ ಮೈತ್ರೇಯ ಅವರು ಮಾತನಾಡಿ, ಸರಕಾರದ ಸೂಚನೆಯಂತೆ ಪ್ರ ವರ್ಗ 1ರಲ್ಲಿ ಇರುವ ಸಮುದಾಯವನ್ನು ಪರಿಶಿಷ್ಟ ಜಾತಿ ಪಂಗಡಕ್ಕೆ ಸೇರಿಸುವ ಬಗ್ಗೆ ದೃಡಪಡಿಸಿಕೊಳ್ಳಲು ಕುಲ ಶಾಸ್ತ್ರೀಯ ಅಧ್ಯಯನ ನಡೆಸಲು ದೇವರಾಜ ಅರಸ ಸಂಶೋಧನಾ ಸಂಸ್ಥೆ ಕಳೆದ ವರ್ಷ ಹಂಪಿ ವಿಶ್ವ ವಿದ್ಯಾಲಯಕ್ಕೆ ಕೇಳಿಕೊಂಡಿತ್ತು ಅದರಂತೆ ನಮ್ಮ ತಜ್ಞರ ತಂಡ ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ಮಾಹಿತಿ ಕಲೆ ಹಾಕಿ ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಭಾಗದ ಉಪ್ಪಾರ ಕುಲಶಾಸ್ತ್ರೀಯ ಅಧ್ಯಯನ ಸಲಹಾ ಸಮಿತಿಯ ಪ್ರಮುಖ ಹಾಗೂ ಉಪ್ಪಾರ ಯುವಕ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಾಶಿ, ಗ್ರಾಮದ ಚಂದ್ರು ಬೆಳಗಲಿ, ಪರಸಪ್ಪ ಬಬಲಿ, ರಮೇಶ ಗುಡೆನ್ನವರ, ಚಂದು ಬೆಳಗಲಿ, ಸಿದ್ದಪ್ಪ ಕಿಡದಾಳ, ಸಂಶೋಧನಾ ಸಹಾಯಕ ಮಂಜುನಾಥ ಉಪ್ಪಾರ ಹಾಗೂ ಅನೇಕ ಮುಖಂಡರು ಇದ್ದರು
