ಮೂಡಲಗಿ: ಯಾದವಾಡದ ಎಮ್.ಡಿ.ಆರ್.ಎಸ್ ಶಾಲೆಯ ವಿದ್ಯಾರ್ಥಿ ಅಕಾಲಿಕವಾಗಿ ಮರಣ ಹೊಂದಿದ ಓಂಕಾರ ಮಹದೇವ ನಾಯಕ ಅವರ ಪೋಷಕರಿಗೆ ಪರಿಹಾರಧನದ 2.50 ಲಕ್ಷ ರೂ. ಗಳನ್ನು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಮೂಡಲಗಿ ಬಿಇಒ ಅಜೀತ್ ಮನ್ನಿಕೇರಿ ಪರಿಹಾರ ಧನದ ಚೇಕ್ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಗಂಗರಡ್ಡಿ, ಬಿಸಿಎಮ್ ತಾಲೂಕಾಧಿಕಾರಿ ಬಿಸಿರೊಟ್ಟಿ, ಪ್ರಾಂಶುಪಾಲರಾದ ಜಿ.ಎಮ್ ಸಕ್ರಿ, ಎಸ್.ಎ ಠಕ್ಕನ್ನವರ ಹಾಗೂ ವಿದ್ಯಾರ್ಥಿಯ ತಂದೆ ಮಹದೇವ ಶಿವರಾಯ ನಾಯಕ ಉಪಸ್ಥಿತರಿದ್ದರು.
