ಬುಧವಾರ , ಮೇ 31 2023
kn
Breaking News

ಎರಡನೆಯ ಅಲೆಯ ಕರೋನಾ ಸೋಂಕಿತ ಪತ್ರಕರ್ತರಿಗೆ ಸೂಕ್ತ ಚಿಕಿತ್ಸೆ ನೀಡಿ

Spread the love

ಮೂಡಲಗಿ :ಕೊರೋನಾ ಎರಡನೆಯ ಅಲೆಯು ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು ಕೊವಿಡ್ ಸೋಂಕಿತರಿಗೆ ಆಸ್ಪತ್ರಗಳಲ್ಲಿ ಸರಿಯಾದ ಸಮಯಕ್ಕೆ ಹಾಸಿಗೆ, ಆಮ್ಲಜನಕ ದೊರೆಯದೆ ಕೊರೋನಾಗೆ ಬಲಿಯಾಗುತ್ತಿದ್ದಾರೆ ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಎಲ್ ವಾಯ್ ಅಡಿಹುಡಿ ಕಳವಳ ವ್ಯಕ್ತಪಡಿಸಿದರು.

ಮಂಗಳವಾರದoದು ಪತ್ರಕರ್ತರಿಗೆ ಕೋವಿಡ ಲಸಿಕೆ ಹಾಗೂ ಕೊರೊನಾ ಸೊಂಕಿತ ಪತ್ರಕರ್ತರಿಗೆ ಹಾಸಿಗೆ ಮತ್ತು ಆಮ್ಲಜನಕ ಕಾಯ್ದಿರಿಸಿ, ತುರ್ತು ಚಿಕಿತ್ಸೆ ನೀಡುವಂತೆ ತಹಶೀಲದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿ, ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಕರ್ತವ್ಯನಿರ್ವಹಿಸುವ ಸಮಯದಲ್ಲಿ ಸೋಂಕು ತಗುಲುವ ಸಾಧ್ಯತೆ ಇದೆ ಅಷ್ಟೆ ಅಲ್ಲದೆ ಸೋಂಕಿಗೆ ತುತ್ತಾಗಿ ಹಾಸಿಗೆ ಹಾಗೂ ಆಮ್ಲಜನಕ ಸಿಗದೆ ಪರದಾಡುವಂತಾಗಬಾರದು ಆದ್ದರಿಂದ ತಾಲೂಕಾಡಳಿತ ಹೆಚ್ಚಿನ ಕಾಳಜಿ ವಹಿಸಿ ಪತ್ರಕರ್ತರಿಗೆ ಹಾಗೂ ಅವರ ಅವರ ಕಟುಂಬಕ್ಕೂ ಕೂಡ ಕೋವಿಡ ಲಸಿಕೆ ಹಾಗೂ ಹಾಸಿಗೆ ಮತ್ತು ಆಮ್ಜನಕ ಸುಲಭವಾಗಿ ನಿಗದಿತ ಸಮಯದಲ್ಲಿ ದೊರೆಯುವಂತೆ ಕಾಯ್ದಿರಿಸಿ ತುರ್ತು ಚಿಕಿತ್ಸೆ ದೊರೆಕಿಸುವಂತೆ ಆಸ್ಪತ್ರೆಗಳಿಗೆ ಸೂಚಿಸಬೇಕು. ಸರಕಾರ ಈಗಾಗಲೆ ಪತ್ರಕರ್ತರನ್ನು ಪ್ರಂಟ್‌ಲೈನ್ ವಾರಿರ‍್ಸ ಎಂದು ಘೋಷಣೆ ಮಾಡಿದ್ದು ಒಳ್ಳೆಯ ಸಂಗತಿಯಾಗಿದೆ ಎಂದರು.

ತಾಲೂಕಾ ಶಿರಸ್ತೆದಾರ ಪರುಶುರಾಮ ನಾಯ್ಕ ಮನವಿ ಸ್ವೀಕರಿಸಿ ಶೀಘ್ರ ತಮ್ಮ ಬೇಡಿಕೆ ಈಡೆರಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಸುಭಾಸ ಗೊಡ್ಯಾಗೋಳ, ಭಗವಂತ ಉಪ್ಪಾರ, ಮಲ್ಲು ಬೋಳನ್ನವರ, ಅಲ್ತಾಫ್ ಹವಾಲ್ದಾರ, ಮಹಾದೇವ ನಡುವಿನಕೇರಿ, ರಾಜು ಮಗದುಮ್, ಹನಮಂತ ಕಂಕಣವಾಡಿ ಇದ್ದರು.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page