ಬುಧವಾರ , ಏಪ್ರಿಲ್ 24 2024
kn
Breaking News

ವಿಕಲಚೇತನ ನೌಕರರ ಬಡ್ತಿ ವಿಚಾರ: ರಾಜ್ಯಾಧ್ಯಕ್ಷರಿಂದ ವಕೀಲರ ಭೇಟಿ

Spread the love

ಬೆಂಗಳೂರು: ವಿಕಲಚೇತನ ನೌಕರರ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ನೀಡಬೇಕಾಗಿರುವ ಶೇಕಡಾ ೩ ರಷ್ಟು ಬಡ್ತಿ ಮೀಸಲಾತಿ ಜಾರಿಗೆ ಮಾಡದ ಸರಕಾರ ನಡೆಯನ್ನು ಪ್ರಶ್ನೆ ಮಾಡಿ ಆದೇಶ ಜಾರಿಗೆ ಮಾಡಿಸುವ ಉದ್ದೇಶದಿಂದ ನ್ಯಾಯಾಲಯದಲ್ಲಿ ದಾವೇ ಹೂಡಲಾಗಿತ್ತು.ಆದೇಶದ ಜಾರಿಗೆ ಕುರಿತಾಗಿ ನ್ಯಾಯಾಲಯದ ದಾವೆ ಯಾವ ಹಂತದಲ್ಲಿ ಇದೇ ಎಂಬುದರ ಕುರಿತಾಗಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರು ವಕೀಲರಾದ ಬಿ.ಎಸ್.ಗೌತಮ ಅವರನ್ನು ಬೆಂಗಳೂರಿನ ಅವರ ಕಚೇರಿಯಲ್ಲಿ ಬೇಟಿ ಮಾಡಲಾಯಿತು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಸುಪ್ರೀಂಕೋರ್ಟ್ ನ ಆದೇಶದಂತೆ ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ ೩ ರಷ್ಟು ಬಡ್ತಿಯಲ್ಲಿ ಮೀಸಲಾತಿ ನೀಡುವಂತೆ ಆದೇಶ ಮಾಡಿ ೩ ವರ್ಷ ಕಳೆದರೂ ಕೂಡಾ ರಾಜ್ಯ ಸರಕಾರ ಮಾತ್ರ ಬಡ್ತಿ ಆದೇಶದ ಬಗ್ಗೆ ಯಾವುದೇ ಕ್ರವ ತೆಗೆದುಕೊಳ್ಳದಿರುವುದನ್ನು ಗಮನಿಸಿ ಸಂಘದ ವತಿಯಿಂದ ಬಡ್ತಿ ಮೀಸಲಾತಿ ಆದೇಶ ಜಾರಿಗೆ ಮಾಡುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.ಅದರಂತೆ ಈಗಾಗಲೇ ಬಡ್ತಿ ಮೀಸಲಾತಿ ಆದೇಶ ಜಾರಿಗೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆ ನೀಡಲಾಗಿದೆ. ನ್ಯಾಯಾಲಯಕ್ಕೆ ಬೇಸಿಗೆ ರಜೆ ಇರುವುದರಿಂದ ತಡವಾಗಿದ್ದು,ಕೂಡಲೇ ಈ ವಿಚಯದ ಬಗ್ಗೆ ಹೆಚ್ಚು ಗಮನವನ್ನು ಹರಿಸುವಂತೆ ವಕೀಲರಿಗೆ ಒತ್ತಾಯ ಮಾಡಲಾಯಿತು.
ವಕೀಲರಾದ ಬಿ.ಎಸ್.ಗೌತಮ ಅವರು ಮಾತನಾಡಿ,ದಾವೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಲಬ್ಯವಾಗಿದ್ದು,ಕೂಡಲೇ ಇದರ ಬಗ್ಗೆ ಸ್ಪಲ್ಪ ಆದೇಶ ನ್ಯಾಯಾಲಯ ನೀಡಲಿದೆ ಎಂದು ಹೇಳಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page