ಗುರ್ಲಾಪೂರ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರವು ಭಕ್ತಿಗೆ ಹೆಸರವಾಸಿಯಾಗಿದೆ ಅಂತಹ ಗ್ರಾಮದ ಹ್ರದಯಬಾಗದಲ್ಲಿರುವ ಅಯ್ಯಪ್ಪಸ್ವಾಮಿಯ ಶುಕ್ರವಾರ ದಿ.1ರಂದು ಹೊಸ ವರ್ಷಾಚರಣೆಯ ದಿನದಂದು ಮಹಾ ಪೂಜೆಯೂ ಗುರು ಸ್ವಾಮಿಗಳ ಸಾನಿದ್ಯದಲ್ಲಿ ನಡೆಯವದು
ಶುಕ್ರವಾರ ಬೆಳೆಗ್ಗೆ 6 ಗಂಟೆಗೆ ಭಕ್ತರಿಂದ ಪಂಪಾ ನದಿಯತ್ತಿರುವ ಹಳ್ಳದಲ್ಲಿ ತಣ್ಣೀರ ಸ್ನಾನ ಮಾಡಿ ಸನಿದಾನದವರಿಗೆ ದಿಡ ನಮಸ್ಕಾರ ಹಾಕಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವರು.
ಸಂಜೆ 5 ಗಂಟೆಗೆ ಅಯ್ಯಪ್ಪನ ಕನ್ಯಾಸ್ವಾಮಿಗಳು ಹಾಗು ಗುರುಸ್ವಾಮಿಗಳು ಮಕ್ಕಳು ಮುತೈದೆರು ಸೇರಿ ಗ್ರಾಮದ ಪ್ರಮುಖ ರಸ್ಥೆಗಳಲ್ಲಿ ಅಯ್ಯಪ್ಪಣ ಬಾವಚಿತ್ರ ಹಾಗೂ ಅಯ್ಯಪ್ಪಣ ಪಲ್ಲಕ್ಕಿ ಉತ್ಸವದೋಂದಿಗೆ ಸಕಲ ವಾದ್ಯವ್ರಂದದೂದಿಗೆ ಸಾಗುತ್ತಾ ಕಂಬಳಿ ಪ್ಲಾಟದ ವೀರಭದ್ರೇಶ್ವರಣಿಗೆ ಮಂಗಳಾರತಿ ಮಾಡಿ ಮರಳಿ ಅಯ್ಯಪ್ಪಣ ಸನ್ನಿಧಾನಕ್ಕೆ ಬಂದು ಅಗ್ನಿಗೆ ಪೊಜೆ ಮಾಡಿ ಮಹಾಪೂಜೆಗೆ ಬಂದ ಎಲ್ಲ ಗುರುಸ್ವಾಮಿಗಳು ಹಾಗೂ ಕನ್ಯಾಸ್ವಾಮಿಗಳು ಅಗ್ನಿ ಹಾದು ಹದಿನೆಂಟು ಮೆಟ್ಟಿಲೆರಿ ಸ್ವಾಮಿಯ ದರ್ಶನ ಪಡೆದು ಜೀವನ ಪಾವನ ಮಾಡಿಕೂಳ್ಳೂವರು ನಂತರ ಮಹಾಪೂಜೆಗೆ ಬಂದ ಭಕ್ತರೆಲ್ಲರು ಅಯ್ಯಪ್ಪನ ಶರಣು ಗೋಶಣೆಯೊಂದಿಗೆ ಹಾಡವನ್ನು ಹಾಡುವರು. ನಂತರ ಅಯ್ಯಪ್ಪಣಿಗೆ ಹಾಗೂ ಗಣಪತಿಗೆ ಸಕಲ ದೇವರಿಗೆ ಮಹಾಮಂಗಳಾರತಿ ಮಾಡಿ ಎಲ್ಲ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಗುವದು ಎಂದು ಭಕ್ತಮಂಡಳಿ ತಿಳಿಸಿದ್ದಾರೆ.
Sarvavani Latest Kannada News