ಗುರುವಾರ , ಮಾರ್ಚ್ 28 2024
kn
Breaking News

ಡಾ|| ಅಂಬೇಡ್ಕರರವರು ಸಂವಿಧಾನ ಶಿಲ್ಪಿ ಯಾಗಿರದೇ, ಅವರೊಬ್ಬ ಆಥಿ೯ಕ ಚಿಂತಕ: ಅಧ್ಯಕ್ಷ ಬಾಹುಬಲಿ ಗಂಡೋಶಿ

Spread the love

ಪರಮಾನಂದವಾಡಿ:- ಸ್ಥಳೀಯ ಗ್ರಾ ಪಂ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ|| ಬಾಬಾಸಾಹೇಬ್ ಅಂಬೇಡ್ಕರ್ 129 ನೇಯ ಜಯಂತಿಯನ್ನು ಆಚರಿಸಲಾಯಿತು. ನಂತರ ಗ್ರಾ ಪಂ ಅಧ್ಯಕ್ಷ ಬಾಹುಬಲಿ ಗಂಡೋಶಿ- ದೇಶವೆ ಕೋರೋನಾ ಕಿಚ್ಚಿನಿಂದ ಉರಿಯುತ್ತಿದೆ.ನಮ್ಮ ಜನ ಬಹಳಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ರ ಸಂವಿಧಾನ ನಮಗೆ ಅತ್ಯಂತ ಉಪಯುಕ್ತವಾಗಿದೆ. ಅವರು ಕೇವಲ ಸಂವಿಧಾನ ಶಿಲ್ಪಿ ಯಾಗಿರದೇ ಅವರೊಬ್ಬ ಆಥಿ೯ಕ ಚಿಂತಕ, ನೀರಾವರಿ ತಜ್ಞ, ಪತ೯ಕತ೯ರಾಗಿ ಜನಮನದಲ್ಲಿ ಅಚ್ಚಳಿಯಾಗಿ ಉಳಿದಿದ್ದಾರೆ. ಎಂದು ನುಡಿದರು.

ಗ್ರಾ.ಪಂ ಪಿ.ಡಿ.ಒ ರಾಜು ಬೆವನೂರ – ಅಂಬೇಡ್ಕರ್ ಅವರು ಸಮಾಜದಲ್ಲಿನ ಮೇಲು ಕೀಳುಗಳ ವಿರುದ್ಧ ಹೋರಾಟವನ್ನು ನಡೆಸಿದ್ದಾರೆ. ಸಮಾಜದಲ್ಲಿನ ಅಂಧ ಶ್ರದ್ಧೆ, ಮೂಡನಂಬಿಕೆ, ತಪ್ಪು ತಿಳುವಳಿಕೆಗಳ ಬಗ್ಗೆ ಅರಿವು ಮೂಡಿಸಿ, ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು. ನಮ್ಮ ದೇಶ ಅನೇಕ ಜಾತಿ, ಉಪಜಾತಿ, ಧರ್ಮ, ಸಂಸ್ಕೃತಿಯನ್ನು ಒಳಗೊಂಡಿದ್ದು ವಿವಿಧತೆಯಲ್ಲೂ ಏಕತೆಯನ್ನು ಪ್ರತಿಪಾದಿಸುತ್ತದೆ. ಇಡೀ ವಿಶ್ವಕ್ಕೆ ಭಾರತದ ಸಂವಿಧಾನ ಶ್ರೇಷ್ಠವಾಗಿದೆ. ಅಂಬೇಡ್ಕರ್ ಸಂವಿಧಾನ ವನ್ನು ಶಾಸಕಾಂಗ, ಕಾಯಾ೯ಂಗ, ಮತ್ತು ನ್ಯಾಯಾಂಗ ಎಂಬ ಮೂರು ಅಂಶಗಳಲ್ಲಿ ಪ್ರತ್ಯೇಕಿಸಿದ್ದಾರೆ. ನಮ್ಮ ಸಂವಿಧಾನವನ್ನು ನಾವೆಲ್ಲರೂ ಕಾಪಾಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷ ಬಾಹುಬಲಿ ಗಂಡೋಶಿ, ಗ್ರಾ ಪಂ ಪಿ ಡಿ ಒ ರಾಜು ಬೆವನೂರ, ಚಿದಾನಂದ ಮಿಠಾರೆ, ಬಿ ಬಿ ಗಲಗಲಿ, ಭೂಪಾಲ್ ಕಾಂಬಳೆ, ಹಾಗೂ ಸವ೯ ಸದಸ್ಯರು ಹಾಜರಿದ್ದರು.

ವರದಿ:- ಶಿವು ಸ್ವಾಮಿ ಪರಮಾನಂದವಾಡಿ


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page