ಗುರುವಾರ , ಮಾರ್ಚ್ 28 2024
kn
Breaking News

ಮೂಡಲಗಿ: ಶ್ರೀ ಸಾಯಿ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಎಸ್‍ಜಿ ಢವಳೇಶ್ವರ ಅವರಿಗೆ ಸನ್ಮಾನ

Spread the love

ಮೂಡಲಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಕಾರದೊಂದಿಗೆ ರೈತರಿಗೆ ಅನುಕೂಲುವಾಗುವ ನಿಟ್ಟಿನಲ್ಲಿ ಮತ್ತು ಸಹಕಾರಿ ಸಂಘಗಳ ಪ್ರಗತಿಗೆ ಶ್ರಮಿಸುವುದಾಗಿ ಹಾಗೂ ಸಾಯಿ ಸೌಹಾರ್ದ ಸಹಕಾರಿಯ ಮಾರ್ಗದರ್ಶಕ ಹಾಗೂ ಮುಖಂಡರಾದ ವೀರಣ್ಣ ಹೊಸೂರ ನೇತೃತ್ವದಲ್ಲಿ ಮೂಡಲಗಿಯಲ್ಲಿ ಇನ್ನೊಂದು ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆ ಮಾಡುವುದಾಗಿ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ,ಹಾಗೂ ದಿ.ಮೂಡಲಗಿ ಸಹಕಾರಿ ಬ್ಯಾಂಕ ಅಧ್ಯಕ್ಷ ಸುಭಾಸ ಢವಳೇಶ್ವರ ಹೇಳಿದರು.
ಅವರು ಸೋಮವಾರ ಪಟ್ಟಣದ ಶ್ರೀ ಸಾಯಿ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ,ಪುರಸಭೆ ಸದಸ್ಯ ಶಿವಪ್ಪ ಚಂಡಕಿ ಮಾತನಾಡಿ, ನಮ್ಮ ಸಂಘದ ಸದಸ್ಯರನ್ನು ಪ್ರಥಮ ವರ್ಷದಲ್ಲೇ ಬಿಡಿಸಿಸಿ ಬ್ಯಾಂಕ ಷೇರು ಸದಸ್ಯರನ್ನಾಗಿ ಮಾಡಿರುವುದಕ್ಕೆ ಅವರಿಗೆ ಕೃತಜತೆ ಸಲ್ಲಿಸುವುದಾಗಿ ಹೇಳಿದರು.
ಸಾಯಿ ಸೌಹಾರ್ದ ಸಹಕಾರಿಯ ಮಾರ್ಗದರ್ಶಕ ಹಾಗೂ ಮುಖಂಡರಾದ ವೀರಣ್ಣ ಹೊಸೂರ,ಅಧ್ಯಕ್ಷ ಮರೆಪ್ಪ ಮರೆಪ್ಪಗೋಳ, ನಿರ್ದೇಶಕರಾದ ಮಲ್ಲಿಕಾರ್ಜುನ ಕಬ್ಬೂರ, ಶಂಕರ ಮುಗುಳಖೋಡ, ಹಸನಸಾಬ ಕುರಬೇಟ, ರವೀಂದ್ರ ಮಠಪತಿ, ಚಿನ್ನಪ್ಪ ಝಂಡೆಕುರಬರ,ಡಾ.ಮಹೇಶ್ವರ ಹಳ್ಳೂರ, ಬಾಲಗೌಡ ಪಾಟೀಲ ಸಿಬ್ಬಂದಿ ಮಹಾಂತೇಶ ಡೋಣಿ, ಎಸ್ ಎಲ್ ಪಾಟೀಲ, ಎಸ್ ಎಚ್ ಹವಳೆವ್ವಗೋಳ, ಚಂದ್ರು ದರೂರ ಇದ್ದರು


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page