ಶುಕ್ರವಾರ , ಮಾರ್ಚ್ 29 2024
kn
Breaking News

ಟೆಲಿಪೋನ್ ಸಲಹೆಗಾರ ಸಮಿತಿಗೆ ನೇಮಕ, ಸತ್ಕಾರ

Spread the love

ಮೂಡಲಗಿ: ಬಿ.ಎಸ್.ಎನ್.ಎಲ್ ಟೆಲಿಫೋನ್ ಸಲಹೆಗಾರ ಸಮಿತಿಗೆ ನೂತನವಾಗಿ ನಾಮ ನಿರ್ದೇಶನ ಸದಸ್ಯರಾಗಿ ನೇಮಕಗೊಂಡ ಬಿಜೆಪಿ ಕಾರ್ಯಕರ್ತರಾದ ಈರಪ್ಪ ಢವಳೇಶ್ವರ, ಶ್ರೀಶೃಲ ಪೂಜೇರಿ, ಬಸನಗೌಡ ಕೊಳದೂರ, ರೇನಪ್ಪ ಸೋಮನಗೌಡ, ಮಲ್ಲೇಶ ಸುಳೇಭಾವಿ ಅವರನ್ನು ಸಂಸದ ಈರಣ್ಣ ಕಡಾಡಿ ಅವರು ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೇಮಕಗೊಂಡ ನೂತನ ಸದಸ್ಯರನ್ನು ಭಾರತ ದೂರ ಸಂಪರ್ಕ ಸಂಚಾರ ನಿಗಮದ ವಿಭಾಗ ಅಧಿಕಾರಿ ಎಸ್.ಕೆ.ಘೋಷ ಈ ಕುರಿತು ಆದೇಶ ಹೊರಡಿಸಿದ್ದು ಬೆಳಗಾವಿ ಜಿಲ್ಲಾ ದೂರಸಂಪರ್ಕ ನಿಗಮಕ್ಕೆ ಸಲಹೆಗಾರ ಸಮಿತಿಯ ಸದಸ್ಯರಾಗಿ ೨೦೨೪ರ ಜ. ೧೩ರವರೆಗೆ ಇವರ ಅಧಿಕಾರ ಅವಧಿ ಇರಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿ ನೇಮಕಗೊಂಡ ಸದಸ್ಯರೆಲ್ಲ ಕುಂದು ಕೊರತೆಯಾಗದಂತೆ ಗ್ರಾಹಕರ ಹಿತ ಕಾಪಾಡಬೇಕು ಎಂದರು.
ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳಾದ ತಮ್ಮಣ ದೇವರ, ಸುರೇಶ ಮಠಪತಿ, ಅಶೋಕ ಶಿವಾಪೂರ, ಶ್ರೀಕಾಂತ ಕೌಜಲಗಿ, ಅಡಿವೆಪ್ಪ ಕುರಬೇಟ, ಮಹಾದೇವ ಮಸರಗುಪ್ಪಿ, ಬಸವರಾಜ ಗಾಡವಿ, ಬಸವರಾಜ ಹಿಡಕಲ್, ನಿಂಗಪ್ಪ ದುಂಡನ್ನವರ, ಭೀಮಶಿ ಬಂಗಾರಿ, ಈಶ್ವರ ಗಾಡವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page