ಶುಕ್ರವಾರ , ಮಾರ್ಚ್ 29 2024
kn
Breaking News

ಸಂಸದರು, ಶಾಸಕರ ಫೋಟೋ ತೆರವುಗೊಳಿಸಿ : ಬೆಳಗಾವಿ ಡಿಸಿ ಆದೇಶ

Spread the love

ಬೆಳಗಾವಿ : ಲೋಕಸಭಾ ಸದಸ್ಯರ, ಶಾಸಕರ ಭಾವ ಚಿತ್ರ ದರ್ಶನ ಎಲ್ಲೆಡೆ ಕಂಡು ಬರುತ್ತದೆ. ಇದು ಸ್ಥಳೀಯ ಯೋಜನೆಯಡಿ ಕೈಗೊಂಡ ಕಾಮಗಾರಿಗಳಲ್ಲಿ ಭಾವಚಿತ್ರ ಅಳವಡಿಸಿರುವುದು ಯಾವ ನ್ಯಾಯ ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಪ್ರಶ್ನಿಸಿ ಈ ಬಗ್ಗೆ ಮಾಹಿತಿ ಕೋರಿದ್ದಾರೆ.

ಲಘು ತಂಗುದಾಣ (ಬಸ್ ಶೆಲ್ಟರ್)ಗಳ ಫೋಟೋಗಳಲ್ಲಿ ಕಂಡು ಬರುತ್ತದೆ. ಸಾರಿಗೆ ಭಾವಚಿತ್ರವನ್ನು ಕೂಡಲೇ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ಸರ್ಕಾರವನ್ನು ಕೋರಿರುತ್ತಾರೆ. ಅರ್ಜಿ ಮತ್ತು ಆಡಕಗಳನ್ನು ಕಳುಹಿಸಿದ್ದು, ಈ ಯೋಜನೆ ಆಡಿ ಕಾಮಗಾರಿಗಳ ಪೂರ್ಣ ವಿವರಗಳನ್ನು ಮಾತ್ರ ಫಲಕಗಳಲ್ಲಿ ಹಾಕಲು ಅವಕಾಶ ಕಲ್ಪಿಸಲಾಗಿದ್ದು, ಭಾವಚಿತ್ರವನ್ನು ಅಳವಡಿಸಲು ಅವಕಾಶವಿರುವುದಿಲ್ಲ. ಅದ್ದರಿಂದ ಈ ಬಗ್ಗೆ ಕೂಡಲೇ ನಿರ್ದೇಶಿಸಿರುತ್ತಾರೆ.
ಲೋಕಸಭೆ/ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಕೈಕೊಂಡ ಕಾಮಗಾರಿಗಳಲ್ಲಿ ಪೂರ್ಣ ವಿವರಗಳನ್ನು ಮಾತ್ರ ನಾಮ ಫಲಕಗಳಲ್ಲಿ ಹಾಕಲು ಅವಕಾಶ ಕಲ್ಪಿಸಲಾಗಿದ್ದು, ಭಾವಚಿತ್ರವನ್ನು ಅಳವಡಿಸಲು ಅವಕಾಶವಿಲ್ಲವಾದ್ದರಿಂದ, ಈ ಕುರಿತು ಸರ್ಕಾರದ ನಿರ್ದೇಶನದನ್ವಯ ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಕೊಂಡು, ಕೈಕೊಂಡ ಕ್ರಮದ ಬಗ್ಗೆ ಛಾಯಾ ಚಿತ್ರದೊಂದಿಗೆ ತಮ್ಮ ವಿವರವಾದ ವರದಿಯನ್ನು ಒಂದು ವಾರದೊಳಗಾಗಿ ಸಲ್ಲಿಸಲು ಬೆಳಗಾವಿ ಜಿಲ್ಲಾಧಿಕಾರಿಗಳು ಕೋರಿದ್ದಾರೆ.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page