ಗುರುವಾರ , ಮಾರ್ಚ್ 28 2024
kn
Breaking News

ರಾಜ್ಯಾಧ್ಯಕ್ಷರ ಮೇಲೆ ಹಲ್ಲೆಗೆ ಯತ್ನ:ಖಂಡನೆ,ಕ್ಷಮೆಯಾಚನೆಗೆ ಆಗ್ರಹ

Spread the love

ಕೊಪ್ಪಳ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಅವರ ಮೇಲೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಲ್ಲದವರು ತಳ್ಳಾಟ ಹಾಗೂ ನೂಕಾಟ ಮಾಡುವ ಮೂಲಕ ಹಲ್ಲೆಗೆ ಯತ್ನ ನಡೆಸಿದವರ ಕ್ರಮವನ್ನು ವಿಕಲಚೇತನ ನೌಕರರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಅಂದಪ್ಪ ಇದ್ಲಿ ಅವರು ಖಂಡಿಸುವುದಲ್ಲದೇ ಕೂಡಲೇ ಹಲ್ಲೆಗೆ ಯತ್ನ ನಡೆಸಿದವರು ಕ್ಷಮೆಯಾಚನೆ ಮಾಡಬೇಕು ಇಲ್ಲದಿದ್ದರೆ ಜ.೨೯ ರ ಶನಿವಾರ ಸಂಘದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಅವರು ನಗರದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರೆಯಲಾಗಿದ್ದ ತಾಲೂಕ ಮಟ್ಟದ ವಿಕಲಚೇತನ ನೌಕರರ ಸಭೆಯನ್ನು ಉದ್ದೇಶಿಸಿ ಮಾತನಾಡಿ,ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಅವರನ್ನು ಸಭೆ ಇದೇ ಎಂದು ಕರೆಸಿಕೊಂಡು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಲ್ಲದವರನ್ನು ಕರೆಸಿಕೊಂಡು ಅವರ ಮೇಲೆ ತಳ್ಳಾಟ ಹಾಗೂ ನೂಕಾಟ ನಡೆಸಿರುವ ಘಟನೆಯನ್ನು ರಾಜ್ಯದ ಸಮಸ್ತ ವಿಕಲಚೇತನ ನೌಕರರ ಪರವಾಗಿ ಖಂಡಸಲಾಗುತ್ತಿದೆ.ಯಾವುದೇ ಒಂದು ಸಂಘದ ಸಭೆಯನ್ನು ಕರೆದಾಗ ಆ ಸಂಘಕ್ಕೆ ಪದಾಧಿಕಾರಿಗಳನ್ನು ಮಾತ್ರ ಕರೆಯಬೇಕು.ಆದರೆ ಇಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೀಡಿದ ದೂರಿನ ಬಗ್ಗೆ ಪ್ರಶ್ನೆ ಮಾಡುವವರ ಮೇಲೆ ಹಲ್ಲೆ ಮಾಡಬೇಕು ಎಂಬ ಉದ್ದೇಶದಿಂದ ಕರೆಸಲಾಗಿದೆ ಎಂಬ ಅನುಮಾನ ಮೂಡತೊಡಗಿದೆ.ಸಭೆ ಎಂದ ಮೇಲೆ ಸಭೆಯ ವಿಷಯದ ಕುರಿತು ಚರ್ಚೆ ಮಾಡಬೇಕು ಅದು ಬಿಟ್ಟು ತಳ್ಳಾಟ ಹಾಗೂ ನೂಕಾಟ ನಡೆಸುವುದು ಸರಿಯಾದ ಕ್ರಮವಲ್ಲ.ಕೂಡಲೇ ತಳ್ಳಾಟ ಹಾಗೂ ನೂಕಾಟ ಮಾಡುವುದರ ಮೂಲಕ ಹಲ್ಲೆಗೆ ಯತ್ನ ನಡೆಸಿದವರು ಕ್ಷಮೆ ಕೇಳಬೇಕು ಇಲ್ಲದಿದ್ದರೆ ಅನಿವಾರ್ಯವಾಗಿ ಸಂಘದ ವತಿಯಿಂದ ಅಂಥವರ ವಿರುದ್ದ ಕ್ರಮಕ್ಕಾಗಿ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಅವರು ಸಭೆ ಇದೆ ಎಂದು ಸಂದೇಶ ಕಳುಹಿಸಿದ್ದರಿಂದ ನಾನು ಸಭೆಗೆ ಹೋಗಿದ್ದೆ.ಆದರೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಬೇರೆ ಸಂಘದ ಪದಾಧಿಕಾರಿಗಳು ನನ್ನನ್ನು ತಳ್ಳಾಟ ಹಾಗೂ ನೂಕಾಟ ಮಾಡಿದರು.ಸಂಘದ ಸಭೆಗೆ ಬರುವಂತೆ ನನಗೆ ಸಭೆಯ ನೋಟಿಸ್ ಕೂಡಾ ಕೊಟ್ಟಿಲ್ಲಾ ಹಾಗೂ ಸಿ.ಆರ್.ಪಿ.ಹಾಗೂ ಬಿ.ಆರ್.ಪಿ.ಅವರು ಸಂಘದ ಕಾರ್ಯಗಳ ಕುರಿತು ಪ್ರಶ್ನೆ ಮಾಡಬಾರದು ಎಂಬ ಆದೇಶವನ್ನು ಕೊಡುವುದರ ಮೂಲಕ ಸಂಘದವರು ಸಮರ್ಥ ಮಾಡಿಕೊಳ್ಳಬೇಕಿತ್ತು.ಆದರೆ ಅವರ ಬಳಿ ದಾಖಲೆ ಇಲ್ಲದ ಕಾರಣ ಬೇರೆ ಸಂಘದ ಸದಸ್ಯರ ಮೂಲಕ ನನ್ನ ಮೇಲೆ ತಳ್ಳಾಟ ಮಾಡಿಸಿದ್ದಾರೆ.ನನಗೆ ಸಂಘ ಸಭೆಗೆ ಬರುವಂತೆ ನೋಟಿಸ್ ನೀಡಿದ ಬಗ್ಗೆ ಹಾಗೂ ಸಿ.ಆರ್.ಪಿ.ಹಾಗೂ ಬಿ.ಆರ್.ಪಿ.ಅವರು ಸಂಘದ ಕಾರ್ಯ ವೈಖರಿಯ ಬಗ್ಗೆ ಎಲ್ಲಿಯೂ ಪ್ರಶ್ನೆ ಮಾಡಬಾರದು ಎಂಬ ದಾಖಲೆಗಳನ್ನು ನೀಡಿದರೆ ನಾನು ಸಂಘದ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಲು ಬದ್ದ ಇಲ್ಲದಿದ್ದರೆ ದೂರಿಗೆ ಸಂಬಂಧಿಸಿದಂತೆ ದಾಖಲೆ ನೀಡುವಂತೆ ಒತ್ತಾಯಿಸಿ ಧರಣಿ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ಸಂಘದ ಜಿಲ್ಲಾಧ್ಯಕ್ಷರಾದ ಅಂದಪ್ಪ ಬೋಳರಡ್ಡಿ ಮಾತನಾಡಿದರು.
ಸಭೆಯಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹುಳಿ,ತಾಂತ್ರಿಕ ಗೌರವ ಸಲಹೆಗಾರರಾದ ಕಾಶಿನಾಥ ಸಿರಿಗೇರಿ,ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ಮಾರನಬಸರಿ,ತಾಲೂಕ ಸಂಘಟನಾ ಕಾರ್ಯದರ್ಶಿ ಟಿ.ಗೋವಿಂದಪ್ಪ,ಸಹ ಕಾರ್ಯದರ್ಶಿ ಅಶೋಕ ಕಂಚಗಾರ,ಸಾಂಸ್ಕೃತಿ ಕಾರ್ಯದರ್ಶಿ ಕುಮಾರಸ್ವಾಮಿ,ನಿರ್ದೇಶಕರಾದ ಹನುಮಂತಪ್ಪ,ಸಂಗಪ್ಪ ವಟಪರವಿ,ಶ್ರೀಶೈಲ ಪಟ್ಟಣಶೆಟ್ಟಿ ಮುಂತಾದವರು ಹಾಜರಿದ್ದರು.


Spread the love

About gcsteam

Check Also

ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ-ಸಂಸದ ಕಡಾಡಿ ಸಂತಾಪ

Spread the loveಮೂಡಲಗಿ: ಏಳು ದಶಕಗಳ ಕಾಲ ತಮ್ಮ ಗಾನಸುಧೆಯಿಂದ ಸಂಗೀತ ಜಗತ್ತನ್ನು ಶ್ರೀಮಂತಗೊಳಿಸಿದ ಗಾನ ಕೋಗಿಲೆ, ಭಾರತರತ್ನ, ಪದ್ಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page