ಗುರುವಾರ , ಮಾರ್ಚ್ 28 2024
kn
Breaking News

ಹಳ್ಳೂರ : ಬಸವೇಶ್ವರ ಜಯಂತಿ ಹಾಗೂ ಬಸವೇಶ್ವರ ಜಾತ್ರೆ ರದ್ದು

Spread the love

SUBSCRIBE YOUTUBE CHANNEL

ಹಳ್ಳೂರ: ಕೊರೋನಾ ವೈರಸ್ ಇಡೀ ದೇಶದಾದ್ಯಾoತ ಮರಣ ಮೃದಂಗ ಭಾರಿಸುತ್ತಿರುವ ಹಿನ್ನೆಲೆ ಇಡೀ ದೇಶದ ತುಂಬೆಲ್ಲಾ ಸರಕಾರ ಲಾಕ್ ಡೌನ್ ಆದೇಶ ಹೊರಡಿಸಿದೆ. ಅದರಿಂದ ಇದೆ ತಿಂಗಳು 26/04/2020 ರಂದು ನಡೆಯಬೇಕಾಗಿದ್ದ ಬಸವ ಜಯಂತಿಯ ಆಚರಣೆಯನ್ನು ಹಾಗೂ ಬಸವೇಶ್ವರ ಜಾತ್ರೆಯನ್ನು ರದ್ದುಪಡಿಸಾಲಾಗಿದೆ ಎಂದು ಬಸವಶ್ರೀ ಸೇವಾ ಯುವಕ ಸಂಘದ ಅಧ್ಯಕ್ಷ ಬಸವರಾಜ್ ಬೋಳನ್ನವರ ಹೇಳಿದರು.

ಗ್ರಾಮದ ಬಸವ ನಗರ ತೋಟದ ಬಸವೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ ಕರೆಯಲಾದ ಸಭೆಯಲ್ಲಿ ಮಾತನಾಡಿ, ಈ ವರ್ಷ ಬಸವೇಶ್ವರ ಜಯಂತಿಯನ್ನು ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸಿ ಆಚರಿಸಬೇಕು ಎಂದು ತೋಟದ ಎಲ್ಲ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಇಂದು ತೋಟದ ಪ್ರಮುಖರ ಸಭೆಯಲ್ಲಿ ಜಯಂತಿಯನ್ನು ರದ್ದುಪಡಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಕೊರೋನಾ ರೋಗ ನಿಯಂತ್ರಣ ಹಾಗೂ ಹಾಗೂ ಸರ್ಕಾರದ ಆದೇಶದಂತೆ ನಾವೆಲ್ಲ ನಮ್ಮ ಮನೆಗಳಲ್ಲಿ ಶ್ರೀ ಬಸವ ಜಯಂತಿಯನ್ನು ಆಚರಿಸಬೇಕು ಹಾಗೆ ಯಾರು ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಲಕ್ಷ್ಮಣ ಯಡವನ್ನವರ, ರವೀಂದ್ರ ನುಚ್ಚುoಡಿ, ನಾಗಪ್ಪ ನಿಡೋಣಿ, ಅರುಣ ಬ್ಯಾಡಗಿ, ಬಸವರಾಜ್ ಮಹದೇವ್ ಬೋಳನವರ, ಶ್ರೀಶೈಲ ಬೋಳನವರ, ಪ್ರಭಾಕರ್ ಮಾಳಿ, ಅಡಿವೆಪ್ಪ ನುಚ್ಚುoಡಿ,ಮಲ್ಲಪ್ಪ ಬ್ಯಾಳಿ, ಶ್ರೀಶೈಲ್ ನಿಂಗನೂರ, ಹಣಮಂತ ಮುರಗೋಡ, ಆಪೋಜಿ ಬೋಳನ್ನವರ, ಬಸಪ್ಪ ಮುರಗೋಡ, ಮಲ್ಲು ಬೋಳನವರ ಇದ್ದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page