ಗುರುವಾರ , ಮಾರ್ಚ್ 28 2024
kn
Breaking News

ವಿಕಲಚೇತನ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಬಿ.ಸಿ‌.ನಾಗೇಶ

Spread the love

ಬೆಂಗಳೂರು:ವಿಕಲಚೇತನ ಶಿಕ್ಷಕರ ಅನೇಕ ಸಮಸ್ಯೆಗಳಿದ್ದು ಅವರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ ಹೇಳಿದರು.
ಅವರು ನಗರದ ತಮ್ಮ ಕಚೇರಿಯಲ್ಲಿ ವಿಕಲಚೇತನ ನೌಕರರ ಸಂಘದಿಂದ ನೀಡಿದ ಮನವಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ,ವಿಕಲಚೇತನ ಶಿಕ್ಷಕರ ಸಮಸ್ಯೆಗಳು ಸೇರಿದಂತೆ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಒಳಗೊಂಡ ಮನವಿ ಪತ್ರವನ್ನು ವಿಕಲಚೇತನ ನೌಕರರ ಸಂಘದ ವತಿಯಿಂದ ನೀಡಿದ್ದಾರೆ.ಮನವಿಯಲ್ಲಿ ಇರುವ ಅಂಶಗಳು ನ್ಯಾಯಯುತವಾಗಿವೆ.ನಾನು ಕೂಡಾ ನೂತನವಾಗಿ ಈ ಖಾತೆಯನ್ನು ವಹಿಸಿಕೊಂಡಿರುವುದರಿಂದ ಇದರ ಬಗ್ಗೆ ಶೀಘ್ರದಲ್ಲೇ ಅಧಿಕಾರಿಗಳ ಸಭೆಯನ್ನು ಕರೆದು ಅವರ ಪರಿಹರಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಹೇಳಿದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಯಾವ ವರ್ಗಾವಣೆಯಲ್ಲಿ ಇಲ್ಲದ ಸಮಸ್ಯೆ ಶಿಕ್ಷಕರ ವರ್ಗಾವಣೆಯಲ್ಲಿ ಇವೆ.ವಿಶೇಷ ವಿಕಲಚೇತನ ಶಿಕ್ಷಕರಿಗೆ ವರ್ಗಾವಣೆ ಸಮಯದಲ್ಲಿ ಪದೇ ಪದೇ ಅಂಗವೈಕಲ್ಯತೆ ಸಂಬಂಧಿಸಿದ ತ್ರಿ ಸದಸ್ಯ ವೈದ್ಯಕೀಯ ಪ್ರಮಾಣ ಪತ್ರವನ್ನು ತರಲು ಸೂಚಿಸುವುದು ಅವೈಜ್ಞಾನಿಕವಾಗಿದೆ.ನೇಮಕಾತಿ ಪೂರ್ವದಲ್ಲಿ ಅಂಗವೈಕಲ್ಯತೆ ಸಂಬಂಧಿಸಿದಂತೆ ವೈದ್ಯಕೀಯ ತಪಾಸಣೆಯ ನಂತರವೇ ನೇಮಕಾತಿ ಆದೇಶ ನೀಡುತ್ತಾರೆ ಜೊತೆಗೆ ವಿಕಲಚೇತನರಿಗೆ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ನೀಡಿ ಕೇವಲ ಶಿಕ್ಷಕರ ವರ್ಗಾವಣೆ ಸಮಯದಲ್ಲಿ ಮಾತ್ರ ವೈದ್ಯಕೀಯ ಪ್ರಮಾಣ ಪತ್ರವನ್ನು ಕೇಳುವುದು ಅವೈಜ್ಞಾನಿಕ ವಿಧಾನವಾಗಿದೆ.ನಿಗದಿ ಪಡಿಸಿದ ಸಮಯದಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಸಿಗದಿದ್ದರೆ ವಿಕಲಚೇತನ ಶಿಕ್ಷಕ ವರ್ಗಾವಣೆ ಸೌಲಭ್ಯದಿಂದ ವಂಚಿತರಾಗುತ್ತರೆ.ಒಂದು ಬಾರಿ ವಿಕಲಚೇತನರಾದರೆ ಸಾಮಾನ್ಯರ ರೀತಿಯಲ್ಲಿ ಆಗಲು ಸಾಧ್ಯವಿಲ್ಲ ಆದ್ದರಿಂದ ಪದೇ ಪದೇ ಪ್ರಮಾಣ ಪತ್ರ ಕೇಳುವ ಪದ್ದತಿಯನ್ನು ಕೈ ಬೀಡಬೇಕು.ಈ ವಿಷಯದ ಕುರಿತು ಈ ಹಿಂದೆ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅವದಿಯಿಂದ ಒತ್ತಾಯ ಮಾಡಿದರು ಕೂಡಾ ಯಾವುದೇ ಪ್ರಯೋಜವಾಗಿಲ್ಲ ಹಾಗೂ ಸೇವಾ ಅವಧಿಯಲ್ಲಿ ಒಂದು ಬಾರಿ ಮಾತ್ರ ವರ್ಗಾವಣೆಯಾಗಬೇಕು ಎಂಬ ನಿಯಮದಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡುವ ಜೊತೆಗೆ ಯುಡಿಐಡಿ ಕಾರ್ಡ ಪರಿಗಣಿಸುವಂತೆ ವಿಕಲಚೇತನ ನೌಕರರ ಸಂಘದ ವತಿಯಿಂದ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.ಆದರೆ ಸರಕಾರ ಇದರ ವಿರುದ್ದ ಸುಗ್ರೀವಾಜ್ಣೆ ತಂದಿದ್ದಿಂದ ಸಮಸ್ಯೆಯಾಗಿದ್ದು ಕೂಡಲೇ ಮಾನ್ಯ ಶಿಕ್ಷಣ ಸಚಿವರು ನಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸುವುದರ ಮೂಲಕ ವಿಕಲಚೇತನ ಶಿಕ್ಷಕರಿಗೆ ಅನೂಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹುಳಿ,ರಾಜ್ಯ ಉಪಾಧ್ಯಕ್ಷರಾದ ಜಯರಾಮಯ್ಯಾ.ಹೆಚ್.ಜಿ.,ತಾಂತ್ರಿಕ ಗೌರವ ಸಲಹೆಗಾರರಾದ ಕಾಶಿನಾಥ ಸಿರಿಗೇರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ತುಕಾರಾಮ ಲಮಾಣಿ ಮುಂತಾದವರು ಹಾಜರಿದ್ದರು


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page