ಗುರುವಾರ , ಏಪ್ರಿಲ್ 25 2024
kn
Breaking News

Monthly Archives: ಆಗಷ್ಟ್ 2022

ಮೂಡಲಗಿಯಲ್ಲಿ ಶ್ರೀ ವೆಂಕಟೇಶ್ವರ ಸೊಸೈಟಿಯ ಉದ್ಘಾಟನೆ

ಮೂಡಲಗಿ: ಶ್ರೀ ವೆಂಕಟೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಉದ್ಘಾಟನೆಯು ನಾಳೆ ಆ. ೫ರಂದು ಬೆಳಿಗ್ಗೆ ೯ಕ್ಕೆ ಜಾನುವಾರ ಪೇಟೆ ರಸ್ತೆಯಲ್ಲಿರುವ ಎಸ್.ಆರ್. ಸೋನವಾಲಕರ ಬಿಲ್ಡಿಂಗ್‌ದಲ್ಲಿ ನೆರವೇರಲಿದೆ. ಶಿವಬೋಧರಂಗ ಮಠದ ಪೀಠಾಧಿಪತಿಗಳಾಗ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಪೂಜೆ ನೆರವೇರಿ ನಂತರ ಉದ್ಘಾಟನೆ ಮಾಡಲಿದ್ದಾರೆ ಎಂದು ಸೊಸೈಟಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ಧರ್ಮಟ್ಟಿಯ ಕಾಳಗದ ಟಗರು ದಾಖಲೆ ಬೆಲೆಗೆ ಮಾರಾಟ!!

ಮೂಡಲಗಿ : ತಾಲೂಕಿನ ಧರ್ಮಟ್ಟಿ ಗ್ರಾಮದ ಕುರಿಗಾಯಿ ಲಕ್ಷ್ಮಣ ಸಿದ್ಲಿಂಗಪ್ಪ ಕೊರಕಪೂಜೇರ ಇವರ ಮೂರು ವರ್ಷದ ಟಗರನ್ನು ಗದ್ದನಕೇರಿ ಗ್ರಾಮದ ಯಮನಪ್ಪ ಸಂಗೊoದಿಯವರು ಒಂದು ಲಕ್ಷ ಐವತ್ತೈದು ಸಾವಿರ ರೂ.ಗಳಿಗೆ ಖರೀದಿಸುವ ಮೂಲಕ ಸ್ಪರ್ಧಾ ಟಗರುಗಳ ಬೆಲೆಯ ಮಹತ್ವ ತಿಳಿಯುವಂತೆ ಮಾಡಿದ್ದಾರೆ. ಮೂರು ವರ್ಷದ ಡೆಕ್ಕನಿ ತಳಿಯ ಈ ಟಗರವು, ಪ್ರತಿದಿನ ೨ ಲೀಟರ್ ಹಾಲು, ೫ ತತ್ತಿ, ಚಪಾತಿ, ಗೋಧಿ, ಕೆಂಪಹುಳ್ಳಿ, ಕಾರೀಕ, ಶೇಂಗಾ ಜೊತೆಗೆ ಒಣ ಹಾಗೂ …

Read More »

೭೫ ನೇ ಸ್ವಾತಂತ್ರೋತ್ಸವದ ನಿಮಿತ್ಯ ವಿವಿಧ ಕಾರ್ಯಕ್ರಮ

ಮೂಡಲಗಿ: ಅರಭಾವಿ ಕಾಂಗ್ರೆಸ್ ಸೇವಾದಳ ಮತ್ತು ಕೌಜಲಗಿಯ ಸಿಂಧೂತಾಯಿ ಮಹಾದೇವರಾವ್ ದಳವಾಯಿ ಎಜ್ಯುಕೇಶನ್ ಟ್ರಸ್ಟ, ಇವುಗಳ ಸಹಭಾಗಿತ್ವದಲ್ಲಿ ೭೫ ನೇ ಸ್ವಾತಂತ್ರೋತ್ಸವ ನಿಮಿತ್ಯ ಅರಭಾವಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಅಧ್ಯಕ್ಷ ಹಾಗೂ ಕಾಂಗ್ರೇಸ ಮುಖಂಡ ಅರವಿಂದ ದಳವಾಯಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಅಗಷ್ಟ ೪ ರಂದು ಗೋಕಾಕ ಮತ್ತು ಮೂಡಲಗಿ ವಲಯದ ಫ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಭಂದ ಮತ್ತು ಭಾಷಣ ಸ್ಪರ್ದೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಸ್ವಾತಂತ್ರ್ಯ …

Read More »

ನಶಾಮುಕ್ತ ಭಾರತ ಅಭಿಯಾನ, ಮಧ್ಯಪಾನ, ಮಾದಕ ವಸ್ತು ತಂಬಾಕು ವಸ್ತುಗಳು ವ್ಯಸನ ಮುಕ್ತಗೊಳಿಸುವ ಪ್ರತಿಜ್ಞಾ ವಿಧಿ

ಮೂಡಲಗಿ: ಧೂಮಪಾನ, ಮಧ್ಯಪಾನದ ದಾಸ್ಯಕ್ಕೆ ಒಳಗಾಗಿ ಕ್ಯಾನ್ಸರ್, ಹೃದಯಾಘಾತ, ಅಲ್ಸರ ಸೇರಿದಂತೆ ಇತರೆ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಬಳಲಿ ನಿತ್ಯ ಸಾಯುತ್ತಿರುವುದನ್ನು ಮನಗಂಡು ವ್ಯಸನ ಮುಕ್ತ-ಸ್ವಚ್ಚ ಪರಿಸರಯುಕ್ತ ಸಮಾಜಕ್ಕಾಗಿ ಯುವ ಜನತೆಯನ್ನು ತೊಡಗಿಸುವ ಉದ್ದೇಶದಿಂದ ನಶಾಮುಕ್ತ ಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ|| ಎಮ್. ಜಿ. ಕೆರುಟಗಿ ಹೇಳಿದರು. ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಬಾಗಲಕೋಟೆ ತೋಟಗಾರಿಕೆ …

Read More »

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ನಿರಂತರ ಮಳೆಯಿಂದಾಗಿ ಮೂಡಲಗಿ ಹಾಗೂ ಗೋಕಾಕ ತಾಲೂಕುಗಳ ತೋಟದ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗಲು ನರೇಗಾ ಯೋಜನೆಯಡಿ ತೋಟದ ರಸ್ತೆ ಕಾಮಗಾರಿಗಳನ್ನು ಆರಂಭಿಸುವoತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ಗೋಕಾಕ-ಮೂಡಲಗಿ ತಾಲೂಕುಗಳ ತೋಟದ ರಸ್ತೆ …

Read More »

You cannot copy content of this page