ಮಂಗಳವಾರ , ಏಪ್ರಿಲ್ 16 2024
kn
Breaking News

Monthly Archives: ಜೂನ್ 2022

ಜು. ೩ ರವಿವಾರ ರಂದು ಕನಕ ಗುರು ಪೀಠದಲ್ಲಿ “ಯು.ಪಿ.ಎಸ್.ಸಿ., ಕೆ.ಪಿ.ಎಸ್.ಸಿ. ತರಬೇತಿ ಕೇಂದ್ರದ ಉದ್ಘಾಟನೆ” ಹಾಗೂ ಎಸ್.ಟಿ. ಮೀಸಲಾತಿಯ “ಹಕ್ಕೋತ್ತಾಯದ ಚಿಂತನ-ಮoಥನ ಸಭೆ” : ವಿನಾಯಕ ಕಟ್ಟಿಕಾರ

ಮೂಡಲಗಿ: ಹರಿಹರದ ಕನಕ ಗುರು ಪೀಠದಲ್ಲಿ “ಯು.ಪಿ.ಎಸ್.ಸಿ., ಕೆ.ಪಿ.ಎಸ್.ಸಿ. ತರಬೇತಿ ಕೇಂದ್ರದ ಉದ್ಘಾಟನೆ” ಹಾಗೂ ಕುರುಬರ ಎಸ್.ಟಿ. ಮೀಸಲಾತಿಯ ಮುಂದಿನ “ಹಕ್ಕೋತ್ತಾಯದ ಚಿಂತನ-ಮoಥನ ಸಭೆ” ಯನ್ನು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರುಗಳಾದ ಶ್ರೀಶ್ರೀಶ್ರೀ ನಿರಂಜನಾನoದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಜು. ೩ ರವಿವಾರ ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಕನಕಗುರುಪೀಠದಲ್ಲಿ ಜರುಗಲಿದೆ ಎಂದು ಬೆಳಗಾವಿ ಜಿಲ್ಲಾ ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ವಿನಾಯಕ ಕಟ್ಟಿಕಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ. …

Read More »

ಸರಕಾರಿ ಶಾಲೆಗಳ ಸಬಲೀಕರಣಗೊಳಿಸುವಲ್ಲಿ ಮಾರ್ಗದರ್ಶಕರ ಹಾಗೂ ಮೇಲಾಧಿಕಾರಿಗಳ ಪಾತ್ರ ಅಗತ್ಯವಾಗಿದೆ : ಅನಿಲಕುಮಾರ ಗಂಗಾಧರ

ಮೂಡಲಗಿ : ಶಿಕ್ಷಕರ ಹೊಂದಾಣಿಕೆ, ಶಾಲಾ ಮೌಲ್ಯಮಾಪನ, ವಿದ್ಯಾ ಪ್ರವೇಶ, ಶೈಕ್ಷಣಿಕ ಕಾರ್ಯಚಟುವಟಿಕೆಗಳ ಅನುಷ್ಠಾನ ಹಾಗೂ ಸರಕಾರಿ ಶಾಲೆಗಳ ಸಬಲೀಕರಣಗೊಳಿಸುವಲ್ಲಿ ಮಾರ್ಗದರ್ಶಕರ ಹಾಗೂ ಮೇಲಾಧಿಕಾರಿಗಳ ಪಾತ್ರ ಅಗತ್ಯವಾಗಿದೆ ಎಂದು ಚಿಕ್ಕೋಡಿ ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿ ಅನಿಲಕುಮಾರ ಗಂಗಾಧರ ಹೇಳಿದರು. ಅವರು ಬುಧವಾರ ಪಟ್ಟಣದ ಬಿಇಒ ಕಛೇರಿಯಲ್ಲಿ ಜರುಗಿದ ಸಿ.ಆರ್.ಪಿಗಳ ಹಾಗೂ ಬಿ.ಆರ್.ಸಿಯಲ್ಲಿ ಜರುಗಿದ ಸರಕಾರಿ ಪ್ರಾಥಮಿಕ ಅತಿಥಿ ಶಿಕ್ಷಕರ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಕಲಿಕಾ ಚೇತರಿಕೆ ತರಬೇತಿಯಲ್ಲಿ …

Read More »

ರಾಮಾಚಾರಿ 2.0 ಚಿತ್ರದಲ್ಲಿ ಮೂಡಲಗಿ ಕಲಾವಿದ ಮಂಜುನಾಥ್ ರೇಳೆಕರ

ಮೂಡಲಗಿ: ಅಲ್ಟಿಮೇಟ್ ಸ್ಟಾರ್ ತೇಜ್ ಅವರ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸೈಂಟಿಪಿಕ್ ತ್ರಿಲ್ಲರ್ ಕಥೆ ಇರುವ ರಾಮಾಚಾರಿ 2.0 ಚಿತ್ರದಲ್ಲಿ ಮೂಡಲಗಿಯ ಕಲಾವಿದ ಮಂಜುನಾಥ ರೇಳೆಕರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ ಎನ್ನುವುದು ಖುಷಿಯ ವಿಚಾರ ಏಕೆಂದರೆ ಚಿತ್ರದ ನಾಯಕಿ ಕಿರುತೆರೆ ನಟಿ ಕೌಸ್ತುಬಾ ಮಣಿ, ನಾಯಕನ ತಂದೆ ಪಾತ್ರದಲ್ಲಿ ದೊಡ್ಮನೆ ಮಗ ರಾಘವೇಂದ್ರ ರಾಜಕುಮಾರ, ಸ್ಪರ್ಶ …

Read More »

ಅಗ್ನಿಪಥ ಯೋಜನೆಯು ದೇಶದ ಸಂವಿಧಾನ ಮತ್ತು ಸಮಾಜಕ್ಕೆ ಮಾರಕ :ಅರವಿಂದ ದಳವಾಯಿ

ಮೂಡಲಗಿ: ಕೇಂದ್ರ ಸರಕಾರವು ಇತ್ತೀಚೆಗೆ ಘೋಷಿಸಿರುವ ಅಗ್ನಿಪಥ ಯೋಜನೆಯನ್ನು ಹಿಂಪಡೆಯಲು ಆಗ್ರಹಿಸಿ ಅರಬಾವಿ ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರು ಸ್ಥಳೀಯ ಕಲ್ಮೇಶ್ವರ ವೃತ್ತದಲ್ಲಿ ಸೋಮವಾರ ಸತ್ಯಾಗ್ರಹ ನಡೆಸಿ ತಹಶೀಲ್ದಾರ ಡಿ.ಜೆ.ಮಹಾತ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿದರು. ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಮಾತನಾಡಿ ಕೇಂದ್ರಸಂವಿಧಾನ ಮತ್ತು ಸಮಾಜಕ್ಕೆಸಂವಿಧಾನ ಮತ್ತು ಸಮಾಜಕ್ಕೆ ಸರಕಾರಸಂವಿಧಾನ ಮತ್ತು ಸಮಾಜಕ್ಕೆವು ಇತ್ತೀಚೆಗೆ ಘೋಷಿಸಿರುವ ಅಗ್ನಿಪಥ ಯೋಜನೆಯು ದೇಶದ ಸಂವಿಧಾನ ಮತ್ತು ಸಮಾಜಕ್ಕೆ ಮಾರಕವಾಗಿರುವದು. ಸಂಸತ್ತು …

Read More »

೩ ಕೋಟಿ ರೂ. ವೆಚ್ಚದ ಲಕ್ಷ್ಮೇಶ್ವರ -ಭೈರನಟ್ಟಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಗ್ರಾಪಂ ಅಧ್ಯಕ್ಷೆ ಜಮೇಲಾ ಮೋಮಿನ ‘ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮುತುವರ್ಜಿಯಿಂದ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ’

ಮೂಡಲಗಿ : ತಾಲೂಕಿನ ಲಕ್ಷ್ಮೇಶ್ವರ ಗ್ರಾಮದಿಂದ ಭೈರನಟ್ಟಿವರೆಗಿನ ರಸ್ತೆ ಕಾಮಗಾರಿಗೆ ಸುಣಧೋಳಿ ಗ್ರಾಪಂ ಅಧ್ಯಕ್ಷೆ ಜಮೇಲಾ ಇಮಾಮಸಾಬ ಮೋಮಿನ ಅವರು ರವಿವಾರದಂದು ಗುದ್ದಲಿ ಪೂಜೆ ನೆರವೇರಿಸಿದರು. ಲೋಕೋಪಯೋಗಿ ಇಲಾಖೆಯಿಂದ ೩ ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದ್ದು, ಹದಗೆಟ್ಟಿದ್ದ ಭೈರನಟ್ಟಿವರೆಗಿನ ರಸ್ತೆ ಕಾಮಗಾರಿ ಮುಂದಿನ ಕೆಲ ದಿನಗಳಲ್ಲಿ ಅಭಿವೃದ್ಧಿಯಾಗಲಿದ್ದು, ಈ ಕಾಮಗಾರಿಗೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ಅನುದಾನ ತಂದು ಗ್ರಾಮಸ್ಥರ ಸುಗಮ …

Read More »

ಶೈಕ್ಷಣಿಕವಾಗಿ ಶಿಕ್ಷಕರಿಗೆ ಹಾಗೂ ಕಲಿಕೆಯಲ್ಲಿ ಮಕ್ಕಳಿಗೆ ಆಗುತ್ತಿರುವ ಸಮಸ್ಯೆಗಳು ಮತ್ತು ತಂತ್ರಾoಶದಲ್ಲಿಯ ತೊಂದರೆಗಳ ಕುರಿತು ಶಿಕ್ಷಕರ ಸಂಘದಿಂದ ಬಿಇಒ ಅಜೀತ ಮನ್ನಿಕೇರಿಯವರಿಗೆ ಮನವಿ

ಮೂಡಲಗಿ: ಶೈಕ್ಷಣಿಕವಾಗಿ ಶಿಕ್ಷಕರಿಗೆ ಹಾಗೂ ಕಲಿಕೆಯಲ್ಲಿ ಮಕ್ಕಳಿಗೆ ಆಗುತ್ತಿರುವ ಸಮಸ್ಯೆಗಳು ಮತ್ತು ತಂತ್ರಾoಶದಲ್ಲಿಯ ತೊಂದರೆಗಳ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೂಡಲಗಿ ಘಟಕದವತಿಯಿಂದ ಬಿಇಒ ಅಜೀತ ಮನ್ನಿಕೇರಿಯವರಿಗೆ ಸಂಘದ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟು ಮನವಿ ನೀಡಿದರು. ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ಮೂಡಲಗಿ ಘಟಕದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಭೆಯಲ್ಲಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಜ್ಞಾನರ್ಜನೆ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ …

Read More »

ಸೋಮವಾರ ದಿ.೨೭ ರಂದು ಅಗ್ನಿಪಥ ಯೋಜನೆ ವಿರುದ್ಧ ಮೂಡಲಗಿಯಲ್ಲಿ ಸತ್ಯಾಗ್ರಹ

ಮೂಡಲಗಿ: ಇತ್ತೀಚೆಗೆ ಕೇಂದ್ರ ಬಿಜೆಪಿ ಸರಕಾರ ಪ್ರಕಟಿಸಿರುವ ಮತ್ತು ದೇಶದ ಸುರಕ್ಷತೆ ಹಾಗೂ ಭದ್ರತೆಗೆ ಮಾರಕವೂ, ಅಲ್ಲದೆ ಯುವ ಜನತೆಯ ಭವಿಷ್ಯಕ್ಕೆ ಕರಾಳ ಶಾಸನವಾಗಿರುವ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಜೂ. ೨೭ ರಂದು ಮುಂಜಾನೆ ೧೦.೦೦ ಘಂಟೆಯಿoದ ಮಧ್ಯಾಹ್ನ ೧.೦೦ ಘಂಟೆವರೆಗೆ ಮೂಡಲಗಿ ಪಟ್ಟಣದ ಕಲ್ಮಶ್ವರ ವೃತ್ತದಲ್ಲಿ ಸತ್ಯಾಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್ಲ ಕಾಂಗ್ರೆಸ ಕಾರ್ಯಕರ್ತರು ತಪ್ಪದೇ ಭಾಗವಹಿಸಬೇಕೆಂದು ಅರವಿಂದ ದಳವಾಯಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Read More »

ಮೂಡಲಗಿ ಪಟ್ಟಣದ ಹಳ್ಳದಲ್ಲಿ ಏಳು ಭ್ರೂಣಲಿಂಗ ಪತ್ತೆ ಪ್ರಕರಣಕ್ಕೆ ಸಂಬoಧಿಸಿದoತೆ ಎರಡು ಆಸ್ಪತ್ರೆಗಳು ಸೀಜ್

ಮೂಡಲಗಿ: ಪಟ್ಟಣದ ಹಳ್ಳದಲ್ಲಿ ಶುಕ್ರವಾರ ಪತ್ತೆಯಾಗಿರುವ ಏಳು ಭ್ರೂಣಲಿಂಗ ಪತ್ತೆ ಪ್ರಕರಣಕ್ಕೆ ಸಂಬoಧಿಸಿದoತೆ ತಹಶೀಲ್ದಾರ ಡಿ ಜಿ ಮಹಾತ್ ಹಾಗೂ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಪೊಲೀಸ್ ಇಲಾ ಖೆಯ ಸಹಕಾರದೊಂದಿಗೆ ಎರಡು ಆಸ್ಪತ್ರೆಗಳನ್ನು ಸೀಜ್ ಮಾಡಿರುವ ಘಟನೆ ಶನಿವಾರದಂದು ನಡೆದಿದೆ. ಪಟ್ಟಣದ ಗುರ್ಲಾಪೂರ ರಸ್ತೆಯಲ್ಲಿ ಇರುವ ವೆಂಕಟೇಶ ಆಸ್ಪತ್ರೆ ಮತ್ತು ಕಲ್ಮೇಶ್ವರ ವೃತ್ತದ ಸಮೀಪವಿರುವ ನವಜೀವನ ಆಸ್ಪತ್ರೆಯನ್ನು ಶೋಧನಾ ಕಾರ್ಯಚರಣೆ ತಂಡ ಎರಡು ಆಸ್ಪತ್ರೆಗಳ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾತರಿಸಿ …

Read More »

ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಹೃದಯವಂತ ಶಾಸಕರು : ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ

ಮೂಡಲಗಿ : ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಹುಣಶ್ಯಾಳ ಪಿವಾಯ್‍ದಿಂದ ಬೀಸನಕೊಪ್ಪವರೆಗಿನ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಹುಣಶ್ಯಾಳ ಪಿವಾಯ್ ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ ತಿಳಿಸಿದರು. ಶುಕ್ರವಾರದಂದು ತಾಲೂಕಿನ ಹುಣಶ್ಯಾಳ ಪಿವಾಯ್ ಗ್ರಾಮದಲ್ಲಿ ಜರುಗಿದ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 4 ಕೋಟಿ ರೂ. ಮೊತ್ತದ ಹುಣಶ್ಯಾಳ ಪಿವಾಯ್-ಬೀಸನಕೊಪ್ಪ ರಸ್ತೆ ಸುಧಾರಣೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು …

Read More »

ಸನ್ಮಾನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ:ಬೀರಪ್ಪ ಅಂಡಗಿ

ಕೊಪ್ಪಳ:ಸನ್ಮಾನದಿoದ ನನ್ನ ಜವಾಬ್ದಾರಿಯು ಹೆಚ್ಚಾಗಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು. ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಕರುನಾಡು ಸಾಧಕರು ಪ್ರಶಸ್ತಿಯು ಲಭಿಸಿದ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ,ಸನ್ಮಾನ ಎಂಬ ಕಾರ್ಯಕ್ರಮದಿಂದ ನನ್ನ ಕಾರ್ಯ ಕ್ಷೇತ್ರದಲ್ಲಿನ ಜವಾಬ್ದಾರಿಯು ಹೆಚ್ಚಾಗಿದೆ ಅಲ್ಲದೇ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಪ್ರೋತ್ಸಾಹ ನೀಡಿದಂತೆ ಆಗುತ್ತದೆ.ವಿಕಲಚೇತನರ ಕ್ಷೇತ್ರದಲ್ಲಿ ಮಾಡಿದ ಅಳಿಲು ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು …

Read More »

You cannot copy content of this page